ಗಾಂಧಿ ಬಂದ: ಸಾಮಾನ್ಯರ ಬದುಕಿನಲ್ಲೊಂದು ಮನ್ವಂತರ
Main Article Content
Abstract
ಡಾ. ಎಚ್. ನಾಗವೇಣಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ‘ಗಾಂಧಿ ಬಂದ’ ಕಾದಂಬರಿಯು ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಪಲ್ಲಟಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿದೆ. ಮಂಗಳೂರಿಗೆ ಗಾಂಧೀಜಿಯವರು ನೀಡಿದ ಮೂರು ಭೇಟಿಗಳ ಹಿನ್ನೆಲೆಯಲ್ಲಿ ಈ ಕೃತಿ ರೂಪುಗೊಂಡಿದೆ. ಕರಾವಳಿಯ ಜನಜೀವನ, ಕಂಬಳ ಮತ್ತು ಭೂತಕೋಲದಂತಹ ಸಾಂಪ್ರದಾಯಿಕ ಆಚರಣೆಗಳ ನಡುವೆ ಗಾಂಧಿವಾದವು ಸಾಮಾನ್ಯ ಜನರ ಬದುಕಿನಲ್ಲಿ ಹೇಗೆ ಕ್ರಾಂತಿಕಾರಿ ಸಂಚಲನ ಮೂಡಿಸಿತು ಎಂಬುದನ್ನು ಇದು ಸೂಕ್ಷ್ಮವಾಗಿ ವಿವರಿಸುತ್ತದೆ. ಸನಾತನ ಕಂದಾಚಾರಗಳ ನಡುವೆಯೂ ಅಸಹಕಾರ ಚಳವಳಿ, ವಿಧವಾ ವಿವಾಹ, ಹಾಗೂ ಅಸ್ಪೃಶ್ಯತಾ ನಿವಾರಣೆಯಂತಹ ಸುಧಾರಣೆಗಳು ಹೇಗೆ ಬೇರೂರಿದವು ಎನ್ನುವುದನ್ನು ದ್ರೌಪದಿ, ಅದ್ರಾಮ, ಮಾರಪ್ಪ ಮತ್ತು ಐತುವಿನಂತಹ ಪಾತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಗವೇಣಿ ಎಚ್., (2000), ಗಾಂಧಿ ಬಂದ, ಬೆಂಗಳೂರು: ಅಭಿನವ ಪ್ರಕಾಶನ.
ರಾಮಚಂದ್ರನ್ ಸಿ.ಎನ್., (2006), ಕಾದಂಬರಿ ಮತ್ತು ಸಮಾಜ, ಬೆಂಗಳೂರು: ಅಂಕಿತ ಪುಸ್ತಕ.
ವಿವೇಕ ರೈ ಬಿ.ಎ., (1985), ತುಳು ಜಾನಪದ ಸಾಹಿತ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ರಹಮತ್ ತರೀಕೆರೆ, (2001), ಕರ್ನಾಟಕದಲ್ಲಿ ಗಾಂಧಿ, ಹೆಗ್ಗೋಡು: ಅಕ್ಷರ ಪ್ರಕಾಶನ.
ಗಿರಡ್ಡಿ ಗೋವಿಂದರಾಜ, (2004), ಹೊಸಗನ್ನಡ ಕಾದಂಬರಿಗಳ ಆಶಯ, ಧಾರವಾಡ: ಸಮಾಜ ಪುಸ್ತಕಾಲಯ.