ವಚನಗಳಲ್ಲಿ ಭಕ್ತಿಯ ಸ್ವರೂಪ

Main Article Content

ಶ್ರೀಶೈಲ

Abstract

ವಚನ ಸಾಹಿತ್ಯವು ಕನ್ನಡ ಭಕ್ತಿ ಚಳವಳಿಯ ಅಮೂಲ್ಯ ಭಾಗವಾಗಿದೆ. 12ನೇ ಶತಮಾನದಲ್ಲಿ ಉದ್ಭವಿಸಿದ ಈ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ನೈತಿಕತೆ ಮತ್ತು ಆಧ್ಯಾತ್ಮಿಕತೆ ಕುರಿತು ಮಹತ್ವದ ಸಂದೇಶಗಳನ್ನು ಹರಡಿತು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಏಲೇಶ್ವರದ ಕೇತಯ್ಯ ಮುಂತಾದ ಶರಣರು ತಮ್ಮ ವಚನಗಳ ಮೂಲಕ ಭಕ್ತಿಯ ನಿಜಸ್ವರೂಪವನ್ನು ಜನರಿಗೆ ಸರಳವಾಗಿ ತಿಳಿಸಿದರು.


ವಚನಗಳಲ್ಲಿ ಭಕ್ತಿ ಎಂದರೆ ಕೇವಲ ಪೂಜೆ ಅಥವಾ ಆಚರಣೆಗಳಲ್ಲ; ಅದು ಮನಸ್ಸಿನ ಶುದ್ಧತೆ, ದೇವರ ಮೇಲೆ ನಿಷ್ಠೆ ಮತ್ತು ಸತ್ಯ ಜೀವನ ನಡೆಸುವ ದೃಷ್ಟಿಕೋನವಾಗಿದೆ. ಇವುಗಳಲ್ಲಿ ವ್ಯಕ್ತವಾಗುವ ಭಕ್ತಿ ವೈಯಕ್ತಿಕ ಅನುಭವದ ಆಧಾರಿತವಾಗಿದ್ದು, ಜಾತಿ, ಲಿಂಗ, ಧರ್ಮ ಎಂಬ ಭೇದಗಳನ್ನು ತಳ್ಳಿಹಾಕುತ್ತದೆ. ಶರಣರು ದೇವರನ್ನು ಒಳಮನಸ್ಸಿನಲ್ಲಿ ಅನುಭವಿಸುವುದೇ ಸತ್ಯಭಕ್ತಿ ಎಂದು ಬೋಧಿಸಿದರು.


ಆದ್ದರಿಂದ, ವಚನಗಳಲ್ಲಿ ಭಕ್ತಿಯ ಸ್ವರೂಪವು ಸರಳತೆ, ಸಮಾನತೆ ಮತ್ತು ಆಂತರಿಕ ಶುದ್ಧತೆಯ ಸಂಕೇತವಾಗಿದೆ. ಈ ಭಕ್ತಿ ಮಾನವನನ್ನು ಉನ್ನತ ಜೀವನದತ್ತ ಕೊಂಡೊಯ್ಯುವ ದಾರಿಯಾಗಿ ಕಾಣುತ್ತದೆ.

Article Details

Section

Research Articles

Author Biography

ಶ್ರೀಶೈಲ

ಪ್ರಾಂಶುಪಾಲ ಮತ್ತು ಸಹಾಯಕ ಪ್ರಾಧ್ಯಾಪಕ, ಶ್ರೀ.ಜಿ.ಆರ್‌.ಜಿ ಕಲಾ, ಶ್ರೀ.ವೈ.ಎ.ಪಿ. ವಾಣಿಜ್ಯ ಹಾಗೂ ಶ್ರೀ.ಎಂ.ಪಿ.ಡಿ. ವಿಜ್ಞಾನ ಪದವಿ ಮಹಾವಿದ್ಯಾಲಯ, ಇಂಡಿ.

How to Cite

ಶ್ರೀಶೈಲ. (2026). ವಚನಗಳಲ್ಲಿ ಭಕ್ತಿಯ ಸ್ವರೂಪ. ಅಕ್ಷರಸೂರ್ಯ (AKSHARASURYA), 15(03), 66 to 74. https://aksharasurya.com/index.php/latest/article/view/2036

References

ಚಿದಾನಂದ ಮೂರ್ತಿ ಎಂ., ವಚನ ಸಾಹಿತ್ಯ (ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂ.5), ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಮುಗಳಿ ರಂ. ಶ್ರೀ., ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು.

ಪ್ರಸನ್ನ ಪಿ. ಬಿ., ಸತ್ಯಕ್ಕನ ವಚನಗಳಲ್ಲಿ ಭಕ್ತಿ, ಇಂಟರ್ನ್ಯಾಷನಲ್‌ ಜರ್ನಲ್‌ ಆಫ್‌ ಕನ್ನಡ ರಿಸರ್ಚ್ (ನಿಯತಕಾಲಿಕೆ).

ಬಸವರಾಜು ಎಲ್., ಬಸವಣ್ಣನವರ ವಚನಗಳು, ಮೈಸೂರು: ಗೀತಾ ಬುಕ್‌ ಹೌಸ್.