ವಸಾಹತು ಕಾಲದ ಮಧ್ಯ ಕರ್ನಾಟಕದ ನಗರೀಕರಣ
Main Article Content
Abstract
ಬ್ರಿಟಿಷ್ ವಸಾಹತುಶಾಹಿ ಆಡಳಿತವು ಕರ್ನಾಟಕದ ಆರ್ಥಿಕತೆ ಮತ್ತು ನಗರೀಕರಣದ ಸ್ವರೂಪದಲ್ಲಿ ಉಂಟುಮಾಡಿದ ಬಹುಮುಖ್ಯ ಪಲ್ಲಟಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಬ್ರಿಟಿಷರು ಸ್ಥಳೀಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಬದಲು, ಇಂಗ್ಲೆಂಡಿನ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳನ್ನು ಒದಗಿಸಲು ಹತ್ತಿ ಮತ್ತು ಕಾಫಿಯಂತಹ ಬೆಳೆಗಳ ಮೂಲಕ ಕೃಷಿಯನ್ನು ಬಲವಂತವಾಗಿ ವಾಣಿಜ್ಯೀಕರಿಸಿದರು. ಇದರ ಪರಿಣಾಮವಾಗಿ ಸಾಂಪ್ರದಾಯಿಕ ಕುಶಲಕರ್ಮಿಗಳು ಉದ್ಯೋಗ ಕಳೆದುಕೊಂಡರೆ, ರೈಲ್ವೆ ಹಾಗೂ ಬಂದರುಗಳ ಸಂಪರ್ಕದೊಂದಿಗೆ ದಾವಣಗೆರೆ, ಧಾರವಾಡ ಮತ್ತು ಬೆಳಗಾವಿಯಂತಹ ಪ್ರದೇಶಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಹೊರಹೊಮ್ಮಿದವು. ವಿಶೇಷವಾಗಿ ಅಮೆರಿಕದ ಅಂತರ್ಯುದ್ಧವು ಈ ಭಾಗದ ಹತ್ತಿ ಮಾರುಕಟ್ಟೆ ಮತ್ತು ಪೇಟೆ-ಪಟ್ಟಣಗಳ ವಿಸ್ತರಣೆಗೆ ದೊಡ್ಡ ಮಟ್ಟದ ವೇಗ ಒದಗಿಸಿತು. ಇದರ ಜೊತೆಗೆ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜಾರಿಗೆ ಬಂದ ಸ್ಥಳೀಯ ಸ್ವಯಮಾಡಳಿತ ಮತ್ತು ಪುರಸಭಾ ಅಧಿನಿಯಮಗಳು ಆಧುನಿಕ ನಗರೀಕರಣ ಪ್ರಕ್ರಿಯೆಗೆ ಹೇಗೆ ಸಾಂಸ್ಥಿಕ ಬುನಾದಿ ಹಾಕಿದವು ಎಂಬುದರ ಸಮಗ್ರ ಚಿತ್ರಣವನ್ನು ಒದಗಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬೇಸೆಲ್ ಜರ್ಮನ್ ಇವ್ಯಾಂಜೆಲಿಕಲ್ ಮಿಷನ್, (1844-1913), ಆನ್ಯುಯಲ್ ರಿಪೋರ್ಟ್ ಆಫ್ ದ ಬೇಸೆಲ್ ಜರ್ಮನ್ ಇವ್ಯಾಂಜೆಲಿಕಲ್ ಮಿಷನ್ - ಇನ್ ಸೌತ್ ವೆಸ್ಟರ್ನ್ ಇಂಡಿಯಾ, ಮಂಗಳೂರು: ಕರ್ನಾಟಕ ಥಿಯಲಾಜಿಕಲ್ ಕಾಲೇಜು.
ಗವರ್ನರ್-ಇನ್-ಕೌನ್ಸಿಲ್ ಆಫ್ ಬಾಂಬೆ, (1815), ಬೋರ್ಡ್ಸ್ ಮಿಸಲೇನಿಯಸ್ ಕನ್ಸಲ್ಟೇಷನ್ಸ್ (ರೆಗ್ಯುಲೇಶನ್ IX, ಎಸ್.ನಂ. 21), ಬಾಂಬೆ.
ಮದ್ರಾಸ್ ಸರ್ಕಾರ, (1890), ಮುನ್ಸಿಪಲ್ ಅಂಡ್ ಲೋಕಲ್ ಡೆವಲಪ್ಮೆಂಟ್ ರೆಕಾರ್ಡ್ (13ನೇ ಆಗಸ್ಟ್), ಮದ್ರಾಸ್.
ಗೋಪಾಲರಾವ್ ಎಚ್. ಎಸ್., (1996), ಕರ್ನಾಟಕದ ಏಕೀಕರಣ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಗೋವಿಂದರಾಜು ಸಿ. ಆರ್., (1998 / ದ್ವಿತೀಯ ಆವೃತ್ತಿ 2000), ಕರ್ನಾಟಕದ ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ, ಬೆಂಗಳೂರು: ಎಸ್ಬಿಎಸ್ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್.
ಚಂದ್ರಶೇಖರ್ ಎಸ್. (ಸಂ.), (1997), ಕರ್ನಾಟಕ ಚರಿತ್ರೆ (ಕ್ರಿ.ಶ. 1900-1956) ಸಂಪುಟ 7, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಚಂದ್ರಶೇಖರ್ ಎಸ್. (ಅನು: ಸಿ. ನಾಗಣ್ಣ), (2000), ದಕ್ಷಿಣ ಭಾರತ-ವಸಾಹತುಶಾಹಿ, ರಾಷ್ಟ್ರೀಯತೆ ಮತ್ತು ಸಂಘರ್ಷ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಮೋಹನ್ಕೃಷ್ಣ ರೈ ಕೆ., (2006), ವಸಾಹತುಪೂರ್ವ ಕರ್ನಾಟಕದ ನಗರ ವ್ಯವಸ್ಥೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಮಹಾಲಿಂಗಂ ಟಿ. ವಿ., (1951), ಎಕನಾಮಿಕ್ ಲೈಫ್ ಇನ್ ದಿ ವಿಜಯನಗರ ಎಂಪಾಯರ್, ಮದ್ರಾಸ್: ಮದ್ರಾಸ್ ವಿಶ್ವವಿದ್ಯಾಲಯ.
ವಿಜಯಕುಮಾರ್ ಟಾಕೂರ್, (1981), ಅರ್ಬನೈಸೇಷನ್ ಇನ್ ಏನ್ಶಿಯಂಟ್ ಇಂಡಿಯಾ, ನವದೆಹಲಿ: ಅಭಿನವ್ ಪಬ್ಲಿಕೇಷನ್ಸ್.