ವಿಮೋಚನಾಪೂರ್ವ ಹೈದರಾಬಾದ್ ಕರ್ನಾಟಕ: ಕನ್ನಡ ಭಾಷೆ ಮತ್ತು ಶಿಕ್ಷಣದ ಅವಲೋಕನ

Main Article Content

ಖಾಜಾವಲಿ ಈಚನಾಳ

Abstract

ವಿಮೋಚನಾಪೂರ್ವ ಹೈದರಾಬಾದ್ ಸಂಸ್ಥಾನದಲ್ಲಿ ಕನ್ನಡಿಗರ ಮತ್ತು ಕನ್ನಡ ಭಾಷೆಯ ಶೋಚನೀಯ ಸ್ಥಿತಿಗತಿಗಳನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ನಿಜಾಮರ ಆಡಳಿತ ಹಾಗೂ ಅವೈಜ್ಞಾನಿಕ ಪ್ರಾದೇಶಿಕ ವಿಂಗಡಣೆಯಿಂದಾಗಿ ಕನ್ನಡ ಭಾಷಿಕ ಪ್ರದೇಶಗಳು ಉರ್ದು ಮತ್ತು ಮರಾಠಿ ಭಾಷೆಗಳ ಆಕ್ರಮಣಕ್ಕೆ ತುತ್ತಾಗಿ, ಕನ್ನಡವು ಕೇವಲ ಆಡುಮಾತಾಗಿ ಉಳಿಯುವಂತಾಯಿತು. ಫಾರಸಿ, ಮರಾಠಿ ಮತ್ತು ಉರ್ದು ಭಾಷೆಗಳ ಪ್ರಾಬಲ್ಯದ ನಡುವೆಯೂ ಕನ್ನಡವನ್ನು ಉಳಿಸಿ ಬೆಳೆಸಲು, ಆಡಳಿತ ಭಾಷೆಯನ್ನಾಗಿ ಮಾಡಲು ನಡೆದ ಪ್ರಯತ್ನಗಳನ್ನು ಇಲ್ಲಿ ಸ್ಮರಿಸಲಾಗಿದೆ. ವಿದ್ಯಾನಂದ ಗುರುಕುಲದಂತಹ ಸಂಸ್ಥೆಗಳು ಕನ್ನಡ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ವಿವರಿಸುತ್ತಾ, ಅಂದಿನ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತು ಶಿಕ್ಷಣ ಎದುರಿಸಿದ ತಾರತಮ್ಯ ಹಾಗೂ ಭಾಷಾವಾರು ಪ್ರಾಂತ ರಚನೆಯ ಹೋರಾಟದ ತುರ್ತನ್ನು ಚರ್ಚಿಸಲಾಗಿದೆ.

Article Details

Section

Research Articles

Author Biography

ಖಾಜಾವಲಿ ಈಚನಾಳ

ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಜೇವರ್ಗಿ.

References

ಹೈದರಾಬಾದ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು, ಎಂ. ದೃವನಾರಾಯಣ.

ಹೈದರಾಬಾದ ಕರ್ನಾಟಕದ ಹಾಡು-ಪಾಡು, ಡಾ. ಅಮರೇಶ ನುಗಡೋಣಿ.

ಹೈದರಾಬಾದ ಕರ್ನಾಟಕ, ಜಾಗೀರದಾರ ಆರ್. ಜಿ., ವಿಠಲರಾವ್ ಲಿಂಗಸಗೂರ.

ಗಿರಿ ಸಂಪದ, ಡಾ. ದೇವೇಂದ್ರಕುಮಾರ ಹಕಾರಿ.