ಕನ್ನಡ ನಾಟಕಗಳಲ್ಲಿ ಪುರಾಣ ಪ್ರಜ್ಞೆಯ ಚಿತ್ರಣ
Main Article Content
Abstract
ಭಾರತೀಯ ಸಂಪ್ರದಾಯದ ರಾಮಾಯಣ, ಮಹಾಭಾರತಗಳಂತಹ ಪುರಾಣ ಕಥೆಗಳು ಆಧುನಿಕ ಕನ್ನಡ ನಾಟಕಗಳಲ್ಲಿ ಹೇಗೆ ಹೊಸ ಆಯಾಮವನ್ನು ಪಡೆದುಕೊಂಡಿವೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಪೌರಾಣಿಕ ಪಾತ್ರಗಳಾದ ಹರಿಶ್ಚಂದ್ರ, ಕರ್ಣ, ಯಯಾತಿ, ದ್ರೌಪದಿ, ಸಾವಿತ್ರಿ ಹಾಗೂ ಸೀತೆಯಂತಹ ವ್ಯಕ್ತಿತ್ವಗಳ ಮೂಲಕ ಆಧುನಿಕ ಸಮಾಜದ ನೈತಿಕತೆ, ಮೌಲ್ಯಗಳು ಮತ್ತು ಆದರ್ಶಗಳನ್ನು ನಾಟಕಕಾರರು ಹೇಗೆ ಪುನರ್-ಸೃಷ್ಟಿಸಿದ್ದಾರೆ ಎಂಬುದನ್ನು ಚರ್ಚಿಸಲಾಗಿದೆ. ಪುರುಷ ಮತ್ತು ಸ್ತ್ರೀ ಕೇಂದ್ರಿತ ನೆಲೆಯಲ್ಲಿ ಪುರಾಣ ಪ್ರಜ್ಞೆಯನ್ನು ಪರಿಶೀಲಿಸಿ, ನವೋದಯ ಮತ್ತು ನವ್ಯ ಕಾಲದ ನಾಟಕಗಳಲ್ಲಿ ಶೋಷಣೆ, ಅಧಿಕಾರ, ತ್ಯಾಗ ಮುಂತಾದ ಸಮಕಾಲೀನ ಸಮಸ್ಯೆಗಳಿಗೆ ಪೌರಾಣಿಕ ವಸ್ತುಗಳನ್ನು ಹೇಗೆ ಸಮೀಕರಿಸಲಾಗಿದೆ ಎಂಬುದರ ವಿವರಣೆ ಇಲ್ಲಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕೆ. ಮರುಳಸಿದ್ದಪ್ಪ, ಆಧುನಿಕ ಕನ್ನಡ ನಾಟಕ, ಸ್ವಪ್ನ ಬುಕ್ ಹೌಸ್, ಬೆಂಗಳೂರು, 2005, ಪು. 112, 114, 116, 134, 131.
ಗಿರಡ್ಡಿ ಗೋವಿಂದರಾಜ: ಸಮಗ್ರ ವಿಮರ್ಶೆ, ಸ್ವಪ್ನ ಬುಕ್ ಹೌಸ್, ಬೆಂಗಳೂರು, 2001, ಪು. 386.
ಕುಲಕರ್ಣಿ, ಆಧುನಿಕ ಕನ್ನಡ ನಾಟಕಗಳಲ್ಲಿ ಪೌರಾಣಿಕ ವಸ್ತು, ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, 1981, ಪು. 24, 51, 162, 169.