ಕನ್ನಡ ವೃತ್ತಿರಂಗಭೂಮಿಯ ಧೃವತಾರೆ: ರಹೆಮಾನವ್ವ
Main Article Content
Abstract
ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಂಗಭೂಮಿ ಪರಂಪರೆಯಲ್ಲಿ ಅಪ್ರತಿಮ ಸಾಧನೆ ಮಾಡಿದ ಕುಕನೂರಿನ ರಹಮಾನವ್ವ ಕಲ್ಮನಿ ಅವರ ಬದುಕು ಮತ್ತು ರಂಗಸಾಧನೆಯನ್ನು ವಿವರಿಸಲಾಗಿದೆ. ಕೇವಲ 14ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ ಇವರು, ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಅತ್ಯುತ್ತಮ ಅಭಿನಯ ನೀಡಿ ಜನಪ್ರಿಯರಾದರು. 1942ರಲ್ಲಿ 'ಲಲಿತಕಲಾ ನಾಟ್ಯಸಂಘ' ಎಂಬ ನಾಟಕ ಕಂಪನಿಯನ್ನು ಸ್ಥಾಪಿಸಿ, ಇಡೀ ಉತ್ತರ ಕರ್ನಾಟಕದಲ್ಲಿಯೇ ಐಕೈಕ ಮಹಿಳಾ ಕಂಪನಿಯ ಮಾಲೀಕಳಾಗಿ ಯಶಸ್ವಿಯಾಗಿ ಮುನ್ನಡೆಸಿದರು. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಶುದ್ಧ ಕನ್ನಡ ಉಚ್ಚಾರಣೆ ಮತ್ತು ಅಸಾಧಾರಣ ರಂಗನಿಷ್ಠೆಯ ಮೂಲಕ ಕೋಮು ಸೌಹಾರ್ದತೆಯ ಪ್ರತೀಕವಾಗಿ ಹಾಗೂ ವೃತ್ತಿರಂಗಭೂಮಿಯ ಧೃವತಾರೆಯಾಗಿ ಮೆರೆದ ಅವರ ಜೀವನವನ್ನು ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಹೈದ್ರಾಬಾದ ಕರ್ನಾಟಕ ರಂಗಭೂಮಿ, ಡಾ. ಬಸವರಾಜ ಸಬರದ, ಪು-138.
ವೃತ್ತಿರಂಗಭೂಮಿಗೆ ಉತ್ತರ ಕರ್ನಾಟಕದ ಮಹಿಳೆಯರ ಕೊಡುಗೆ, ದೇವಕನ್ನಿಕಾ ಡಿ. ನಗರಕರ, ಪು-70.