ಎ.ಪಿ. ಮಾಲತಿ ಅವರ ಕಾದಂಬರಿಗಳಲ್ಲಿ ಅವ್ಯಕ್ತ ಪಾತ್ರಗಳು

Main Article Content

ಪುಟ್ಟಸ್ವಾಮಿ ಎನ್‌.ಎನ್‌.

Abstract

ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದು ವಿಶಿಷ್ಟ ಮನೋಭಾವದ, ವಿಭಿನ್ನ ಶೈಲಿಯ ಬರಹಗಾರರ ಬರವಣಿಗೆಯಿಂದ ಎಂದರೆ ತಪ್ಪಾಗಲಾರದು. ಇಂಥಾ ಕನ್ನಡ ಸಾಹಿತ್ಯದ ಕಾದಂಬರಿ ಪ್ರಕಾರದ ಪ್ರವರ್ತಕರಂತೆ ಕಾಣಸಿಗುವ ನೂರಾರು ಕವಯಿತ್ರಿಯರಲ್ಲಿ ಎ.ಪಿ. ಮಾಲತಿಯವರ ಬರವಣಿಗೆಯೂ ಸಹ ಪರಿಗಣನೀಯ. ಬಹುಜ್ಞಾನ ಶಾಖೆಗಳಿಂದ ಕೂಡಿದ ಇವರ ಬರಹ ಕಥೆ, ಕಾದಂಬರಿ, ವ್ಯಕ್ತಿ ಚರಿತ್ರೆ, ಆತ್ಮಕಥೆ ಮುಂತಾದ ಪ್ರಕಾರಗಳ ಮುಖಮ್ಹೊತ್ತಿದೆ. ವಿದ್ಯಾರ್ಥಿ ದೆಸೆಯಿಂದಲೇ ಬರೆಯಲಾರಂಭಿಸಿದ ಎ. ಪಿ. ಮಾಲತಿಯವರು 1950ರ ದಶಕದಿಂದ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಇತ್ತೀಚಿನವರೆಗೂ ಹಾಗೂ ಈಗಲೂ ಸಹ ಸಾಮಾಜಿಕರ ಬದುಕು ಬವಣೆಗಳನ್ನು ತಮ್ಮ ಲೇಖನಿ ಮುಖೇನ ಹಿಡಿದಿಡುತ್ತಿದ್ದಾರೆ. ಬಾಲ್ಯದ ಬಡತನ, ಶೈಕ್ಷಣಿಕ ಬದುಕು, ವೈವಾಹಿಕ ಬದುಕು, ವಿಭಕ್ತ- ಅವಿಭಕ್ತ ಕುಟುಂಬಗಳ ಅಸ್ತಿತ್ವ-ಅಳಿವು, ವರ್ಗ ಸಂಘರ್ಷದ ಛಾಯೆ, ಜೀವಿತದ ಸವಾಲುಗಳು, ಸಾಧನೆಗಳು, ಹೀಗೇ ದೈನಂದಿನ ಜೀವನದ ಏರುಪೇರು, ಓರೆಕೋರೆಗಳೇ ಇವರ ಲೇಖನಿಯ ಜೀವದ್ರವ್ಯ. ಸ್ತ್ರೀ ಪಾತ್ರಗಳ ಮೂಲಕ ತಮ್ಮೆಲ್ಲಾ ಸಾಮಾಜಿಕ ಸಂವೇದನೆಗಳನ್ನು ಬಿಂಬಿಸುವ ಇವರು ಮಹಾನ್ ವ್ಯಕ್ತಿಗಳಾಗಲು ಅಡ್ಡದಾರಿ, ಕಾಲುದಾರಿಗಳಿಲ್ಲ ಸತತ ಪರಿಶ್ರಮ ಹಾಗೂ ಪ್ರಾಮಾಣಿಕತೆ, ಸಾಮಾಜಿಕ ಸಮಾನ ಮನೋಭಾವ ಬಹಳ ಮುಖ್ಯ ಎಂಬುದನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಸಾಹಿತ್ಯದ ಜ್ಯೋತಿ ಬೆಳಗಿಸುವ ಹಂಬಲವುಳ್ಳ ಇವರು ತಮ್ಮ ಕ್ರಿಯಾಶೀಲ ಬರಹ, ವಿಶಿಷ್ಟ ಪಾತ್ರ ರಚನೆಯ ಮೂಲಕ ಇಂದಿಗೂ ಸಹ ನಾಡಿನಾದ್ಯಂತ ಓದುಗ ವಲಯವನ್ನು ಸೆಳೆಯುತ್ತಿದ್ದಾರೆ.

Article Details

Section

Research Articles

Author Biography

ಪುಟ್ಟಸ್ವಾಮಿ ಎನ್‌.ಎನ್‌.

ಕನ್ನಡ ಸಹಶಿಕ್ಷಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ (ST-144), ರಾಜೇನಹಳ್ಳಿ, ಮಾಲೂರು, ಕೋಲಾರ.

How to Cite

ಪುಟ್ಟಸ್ವಾಮಿ ಎನ್‌.ಎನ್‌. (2025). ಎ.ಪಿ. ಮಾಲತಿ ಅವರ ಕಾದಂಬರಿಗಳಲ್ಲಿ ಅವ್ಯಕ್ತ ಪಾತ್ರಗಳು. ಅಕ್ಷರಸೂರ್ಯ (AKSHARASURYA), 10(01), 50 to 57. https://aksharasurya.com/index.php/latest/article/view/1723

References

ಶೇಷಗಿರಿರಾವ್ ಎಲ್.ಎಸ್., (1990), ಕಾದಂಬರಿ- ಸಾಮಾನ್ಯ ಮನುಷ್ಯ, ಶಾರದಾ ಪ್ರಕಾಶನ, ಬೆಂಗಳೂರು.