ಹಿರೇಕೆರೂರ ಪ್ರದೇಶದಲ್ಲಿ ಕರ ನಿರಾಕರಣೆ ಆಂದೋಲನ
Main Article Content
Abstract
ಈ ಲೇಖನವು ಮುಂಬೈ-ಕರ್ನಾಟಕದ ಹಿರೇಕೆರೂರ ಪ್ರದೇಶದಲ್ಲಿ 1931 ರಲ್ಲಿ ನಡೆದ ಕರ ನಿರಾಕರಣೆ ಆಂದೋಲನದ (ಕರಬಂದಿ) ಮಹತ್ವವನ್ನು ವಿಶ್ಲೇಷಿಸುತ್ತದೆ. 1929-30ರ ತೀವ್ರ ಬರಗಾಲದಿಂದ ರೈತರು ಕಂಗೆಟ್ಟಿದ್ದ ಸಂದರ್ಭದಲ್ಲಿ, ಬಾರಡೋಲಿ ಮತ್ತು ಕಾನೂನುಭಂಗ ಚಳುವಳಿಯಿಂದ ಸ್ಫೂರ್ತಿಗೊಂಡು ಈ ಹೋರಾಟ ಪ್ರಾರಂಭವಾಯಿತು. ಕಚವಿಯ ವೀರನಗೌಡ ಪಾಟೀಲರು ಮತ್ತು ತಿ.ರು. ನೇಸ್ವಿ ಅವರ ನಾಯಕತ್ವದಲ್ಲಿ ಹಂಸಭಾವಿಯಲ್ಲಿ ರೈತ ಪರಿಷತ್ತು ಸೇರಿ ಕಂದಾಯ ಕಟ್ಟದಿರುವ ನಿರ್ಣಯ ಕೈಗೊಂಡಿತು. ಚಳುವಳಿಯು ಉಗ್ರ ಸ್ವರೂಪ ಪಡೆದು ದೇಶದ ಗಮನ ಸೆಳೆಯಿತು. ಸರಕಾರವು ದಬ್ಬಾಳಿಕೆ ನಡೆಸಿದರೂ, ರೈತರ ಅಹಿಂಸಾತ್ಮಕ ಪ್ರತಿರೋಧದಿಂದ ಸರ್ಕಾರವು ಒಪ್ಪಂದಕ್ಕೆ ಬರಲು ಒತ್ತಾಯಿಸಲ್ಪಟ್ಟಿತು. ಇದರ ಫಲವಾಗಿ, 46 ಸಾವಿರ ರೂಪಾಯಿಗಳ ನೀರ ಸಾರಿಗೆ ಸೂಟ್ ಸೇರಿದಂತೆ ಭಾರಿ ಮೊತ್ತದ ಕಂದಾಯವನ್ನು ರದ್ದುಗೊಳಿಸಲಾಯಿತು. ಈ ಯಶಸ್ವಿ ಹೋರಾಟಕ್ಕಾಗಿ ವೀರನಗೌಡರು ‘ಸರದಾರ’ ಎಂಬ ಬಿರುದನ್ನು ಪಡೆದರು. ಇದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರೇಕೆರೂರನ ಪಾತ್ರವನ್ನು ದಾಖಲಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸುರೇಂದ್ರ ದಾನಿ : 1996, ‘ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ’, ಹುಬ್ಬಳ್ಳಿ
ದಿವಾಕರ ರಂಗನಾಥ : 2001, ಕರನಿರಾಕರಣೆಯ ವೀರಕಥೆ, ಹುಬ್ಬಳ್ಳಿ.
ಪಾಟೀಲ ಭೋಜರಾಜ, 1998, ಸ್ವಾತಂತ್ರ್ಯಯೋಧ, ತಿ.ರು. ನೇಸ್ವಿ, ಹಂಸಭಾವಿ.
ಚಿಕ್ಕನರಗುಂದ ಬಸವರಾಜ, 2000, ಕನ್ನಡ ಪತ್ರಿಕಾ ಲೋಕದ ಧೀಮಂತರು, ಬೆಂಗಳೂರು.
ಶೇಖ ಅಲಿ, ಬಿ (ಪ್ರ.ಸಂ), 1997, ಕರ್ನಾಟಕ ಚರಿತ್ರೆ, ಸಂ.7, ಕನ್ನಡ ವಿ.ವಿ., ಹಂಪಿ.
ಭಾರತದ ಗ್ಯಾಜೆಟಿಯರ್, 1984, ಕರ್ನಾಟಕ ರಾಜ್ಯದ ಗ್ಯಾಜೆಟಿಯರ್, ಭಾಗ2, ಬೆಂಗಳೂರು.
ಪಾರ್ವತಿ ಇಂದುಶೇಖರ, 1991, ಕ್ರಾಂತಿವೀರ ಶಿವಣ್ಣ ನೇಸ್ವಿ, ಬೆಂಗಳೂರು.
ಹಿರೇಮಠ ಎಸ್.ಎಂ., 2000, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾವೇರಿ ಜಿಲ್ಲೆ, ಕುಮಾರಪಟ್ಟಣಂ.
ಸರದಾರ ವೀರನಗೌಡರ, 1977, ಆತ್ಮನಿವೇದನೆ, ಹುಬ್ಬಳ್ಳಿ.
ಭಾರತದ ಗ್ಯಾಜೆಟಿಯರ್ (ಧಾರವಾಡ ಜಿಲ್ಲೆ) 1995, ಬೆಂಗಳೂರು.