ಕ್ರಿ ಶ.1924ರ ಐತಿಹಾಸಿಕ ಬೆಳಗಾವಿ ಕಾಂಗ್ರೇಸ್ ಅಧಿವೇಶನ ಮತ್ತು ಅದರ ಪ್ರಭಾವ
Main Article Content
Abstract
ಈ ಲೇಖನವು ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶವಾದ 1924ರ ಐತಿಹಾಸಿಕ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಚಿತ್ರಣವನ್ನು ಒಳಗೊಂಡಿದೆ. ಬೆಳಗಾಂ ಕಾಂಗ್ರೆಸ್ ಅಧಿವೇಶನದ ರೂಪರೇಷೆಗಳು, ಮಹತ್ವ, ಪರಿಣಾಮಗಳು, ಕರ್ನಾಟಕದ ಸ್ವತಂತ್ರ ಚಳುವಳಿಯಲ್ಲಿ ಈ ಅಧಿವೇಶನದ ಪಾತ್ರವನ್ನು ತಿಳಿಯುವುದು. ಗಾಂಧೀಜಿಯವರ ಅಧ್ಯಕ್ಷತೆ ಹಾಗೂ ಗಾಂಧೀಜಿಯವರ ವಿಚಾರಧಾರೆಗಳು, ಮೂಲ ಮಂತ್ರಗಳು, ಚಳುವಳಿಗಳು ಜನಮಾನಸದ ಮೇಲೆ ಹೇಗೆ ಪ್ರಭಾವ ಬೀರಿದವು. ಈ ಸಮ್ಮೇಳನವು ದೊಡ್ಡಮಟ್ಟದ ಆಂದೋಲನವಾಗಿ ಜಾತಿ ಮತ ಲಿಂಗ ಭೇದವಿಲ್ಲದೆ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಹೋರಾಟಕ್ಕೆ ಜನತೆಗೆ ಹೇಗೆ ಸ್ಪೂರ್ತಿ ನೀಡಿತು, ಎಂಬುದನ್ನು ಅರಿಯುವುದು. ಇದರ ವರ್ಚಸ್ಸು ಬ್ರಿಟಿಷರ ಗಮನವನ್ನು ಸೆಳೆಯಿತು. ಅದುವರೆಗೂ ಕೇವಲ ಬ್ರಾಹ್ಮಣರ ಸಂಘ ಎಂದು ಸೀಮಿತವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಈ ಅಧಿವೇಶನದಿಂದ ಹೇಗೆ ರಾಷ್ಟ್ರದ ಸಮಗ್ರ ಜನತೆಯನ್ನು ಪ್ರತಿನಿಧಿಸುವ ಸಂಸ್ಥೆಯಾಗಿ ಶಕ್ತಿಯಾಗಿ ಬೆಳೆಯಿತು ಎಂಬುದನ್ನು ಅರಿಯಬಹುದು. ಅಧಿವೇಶನದಲ್ಲಿ ಪಾಲ್ಗೊಂಡ ಅನೇಕ ರಾಷ್ಟ್ರ ನಾಯಕರ ಭಾಷಣಗಳು, ಸಿದ್ಧಾಂತಗಳು, ಹೋರಾಟದ ಹಾದಿ ಜನರನ್ನು ಹೇಗೆ ಹುರಿದುಂಬಿಸಿದವು ಹಾಗೂ ಈ ಅಧಿವೇಶನವೂ ಒಂದು ಐಕ್ಯತಾ ಸಮ್ಮೇಳನವಾಗಿದ್ದು ಇದರಲ್ಲಿ ಕಾಂಗ್ರೆಸ್ನ ಬಣಗಳು ಹಾಗೂ ಸ್ವರಾಜ್ಯ ಪಕ್ಷ ಎಲ್ಲವೂ ಕಾಂಗ್ರೆಸ್ಸಿನಲ್ಲಿ ಲೀನವಾದವು. ಅಲ್ಲದೆ ಇದು ಹಿಂದೂಮುಸ್ಲಿಮ್ ಐಕ್ಯತೆಯನ್ನು ಹಾಗೂ ಹಾಗೂ ಅಸ್ಪೃಶ್ಯತಾ ನಿವಾರಣೆಯನ್ನು ಪ್ರತಿಪಾದಿಸಿತು. ಈ ಲೇಖನವು, ಗಾಂಧೀಜಿಯವರ ಸಾಮೀಪ್ಯ ಕನ್ನಡಿಗರ ಮೇಲೆ ಬೀರಿದ ಪ್ರಭಾವ, ಮೈಸೂರು ಕಾಂಗ್ರೆಸ್ ಸ್ಥಾಪನೆಯ ಮೇಲೆ ಹಾಗೂ ಕರ್ನಾಟಕದ ಏಕೀಕರಣದ ಮೇಲೆ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಪ್ರಭಾವವನ್ನು ಸಹ ವಿವರಿಸುತ್ತದೆ. ಒಟ್ಟಾರೆಯಾಗಿ ಈ ಸಂಶೋಧನಾ ಲೇಖನವು ಐತಿಹಾಸಿಕ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಮಹತ್ವವನ್ನು ಎತ್ತಿ ತೋರಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಆಧುನಿಕ ಕರ್ನಾಟಕ (ಕ್ರಿ .ಶ.1565 1956) ಪಾಲಾಕ್ಷ
ಕರ್ನಾಟಕ ಒಂದು ಪರಿಚಯ ಡಾ. ರಂಗನಾಥ್
ಆಧುನಿಕ ಕರ್ನಾಟಕದ ಇತಿಹಾಸ (1961 2009) ಪ್ರೊ. ಸಿ. ಎನ್. ಲೋಕಪ್ಪ ಗೌಡ
ಆಧುನಿಕ ಕರ್ನಾಟಕ (ಕ್ರಿ. ಶ.1565 1956) ಪ್ರೊ. ಸುರೇಶ್ ರೈ. ಕೆ.
ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ ಕೆ ಎನ್ ಎ
Indian National Congress [http://inc.in](http://inc.in)