ವಸಾಹತುಶಾಹಿ ಕಾಲದ ಸಾಮಾಜಿಕ ಚಳುವಳಿಗೆ ಸತ್ಯಶೋಧಕ ಸಮಾಜದ ಕೊಡುಗೆ

Main Article Content

ಎಸ್. ಕೆ. ಹೂಗಾರ

Abstract

ವಸಾಹತುಶಾಹಿ ಭಾರತದ ಸಾಮಾಜಿಕ ಪೈಪೋಟಿ ಕಾಲದಲ್ಲಿ, ಸತ್ಯಶೋಧಕ ಸಮಾಜವು ಅಸ್ಪೃಶ್ಯತೆ, ಜಾತಿವ್ಯವಸ್ಥೆ, ಮಹಿಳಾ ಹಕ್ಕುಗಳು ಮತ್ತು ಶೋಷಿತ ವರ್ಗದ ಸಬಲೀಕರಣಕ್ಕೆ ಮಹತ್ವಪೂರ್ಣ ಪಾತ್ರ ವಹಿಸಿತು. ಮಹಾತ್ಮ ಜ್ಯೋತಿಬಾ ಫುಲೆ ಸ್ಥಾಪಿಸಿದ ಈ ಸಮಾಜವು, ಸಾಮಾಜಿಕ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಶಿಕ್ಷಣ, ಸಮಾನತೆ ಮತ್ತು ಧಾರ್ಮಿಕ ಸುಧಾರಣೆಯನ್ನು ಪ್ರಚಾರ ಮಾಡಿತು. ಸತ್ಯಶೋಧಕ ಸಮಾಜದ ಚಳುವಳಿ ಕೇವಲ ರಾಜಕೀಯ ಹೋರಾಟವಲ್ಲದೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಸಹ ಹಂತ ಹಂತವಾಗಿ ಬದಲಾವಣೆಯನ್ನು ತರಲು ಕಾರ್ಯನಿರ್ವಹಿಸಿತು. ಇದರ ಮೂಲಕ ಶೋಷಿತ ಸಮುದಾಯಗಳಿಗೆ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಾಮಾಜಿಕ ಗೌರವ ನೀಡುವ ಅವಕಾಶ ಉಂಟಾಯಿತು.

Article Details

Section

Research Articles

Author Biography

ಎಸ್. ಕೆ. ಹೂಗಾರ

ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿಶ್ವಭಾರತಿ ಕಾಲೇಜು, ತುರನೂರು, ರಾಮದುರ್ಗ.

 

References

ಗೋಪಾಲ.ಬಿ., (2010), ಮಹಾತ್ಮಾ ಜ್ಯೋತಿಬಾ ಫುಲೆ, ಸರ್ವಜನ ಸಮಾಜ ಪ್ರಕಾಶನ, ಬೆಂಗಳೂರು.

ಮಹೇಶ. ಎನ್., (2006), ಸಾಮಾಜಿಕ ಪರಿವರ್ತನಾ ಚಳುವಳಿಯ ಇತಿಹಾಸ, ಪ್ರಬುದ್ಧ ಪ್ರಕಾಶನ, ಜಯನಗರ, ಮೈಸೂರು.

ಮರ್ಜಿ, ಸದಾಶಿವ., (2008), ಜ್ಯೋತಿಬಾ ಫುಲೆ, ಸಮಿತ್., ಪ್ರಕಾಶ, ಹುನಗುಂದ.

Phule, Mahatma Jyotiba., (2025) Gulamgiri Infinite words, An imprint of Saket Prakashan, Chh. Sambhajinagar.