ಆಧುನಿಕ ಸಮಾಜದ ನಿರ್ಮಾಣದಲ್ಲಿ ಶಾಹು ಮಹಾರಾಜರ ಕೊಡುಗೆಗಳು
Main Article Content
Abstract
ಆಧುನಿಕ ಭಾರತದ ಸಾಮಾಜಿಕ ಪುನರ್ನಿರ್ಮಾಣದಲ್ಲಿ ಶಾಹು ಮಹಾರಾಜರ ಕೊಡುಗೆಗಳು ಅಪ್ರತಿಮವಾಗಿವೆ. ಜಾತಿ-ಆಧಾರಿತ ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆಯ ವಿರುದ್ಧ ಅವರು ಶಕ್ತಿಯುತ ಹೋರಾಟ ನಡೆಸಿ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯದ ಬುನಾದಿ ಹಾಕಿದರು. ಶಿಕ್ಷಣದ ಹಕ್ಕನ್ನು ಎಲ್ಲ ವರ್ಗಗಳಿಗೂ ಮುಕ್ತಗೊಳಿಸಿ, ವಿಶೇಷವಾಗಿ ದಲಿತರು, ಬಡವರು ಹಾಗೂ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಕಲ್ಪಿಸಿದರು. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶ ಹಾಗೂ ರಾಜಕೀಯ ಪ್ರತಿನಿಧಿತ್ವ ನೀಡುವಲ್ಲಿ ಶಾಹು ಮಹಾರಾಜರು ಅಗ್ರಗಣ್ಯರಾಗಿದ್ದರು. ಅವರ ದೃಷ್ಟಿಕೋನದಲ್ಲಿ “ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ” ಎಂಬ ತತ್ವಗಳು ಪ್ರತಿಫಲಿಸಿದವು. ಶಾಹು ಮಹಾರಾಜರ ನೂತನ ನೀತಿಗಳು ಸಾಮಾಜಿಕ ನ್ಯಾಯದ ಬಾಗಿಲು ತೆರೆಯುವಂತೆ ಮಾಡಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಬೀಳುವಿಕೆಗೆ ಬಲವಾದ ನೆಲೆ ಒದಗಿಸಿತು. ಹೀಗಾಗಿ ಅವರು ಆಧುನಿಕ ಸಮಾಜದ ಶಿಲ್ಪಿಗಳಾಗಿ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಹಿಂದೂರಾವ್ ಸಾಳುಂಕೆ, (1989), ಛತ್ರಪತಿ ಶಾಹು ಸ್ಮೃತಿದರ್ಶನ, ಮಹಾರಾಷ್ಟ್ರ ಗ್ರಂಥಭಂಡಾರ, ಕೊಲ್ಹಾಪುರ.
ಖೈರ್ಮೋಡೆ ಸಿ.ಬಿ., (2003), ಡಾ. ಬಿ. ಆರ್. ಅಂಬೇಡ್ಕರ್, ಸಂಪುಟ-1, ಸುಗವಾ ಪ್ರಕಾಶನ, ಪುಣೆ.
Dhananjaya Keer, (1976), Shahu Chhatrapati: A Royal Revolutionary, Popular Prakashan, Mumbai.
Upadhyay H.C., (1997), Status of Women in India, Anmol Publications, New Delhi.
Y.D. Phadke, (1986), Shahu Chhatrapati ani Lokamanya Tilak, Shrividya Prakashan, Pune.
Dhananjaya Keer, (2001), Rajashri Shahu Chhatrapati: Ek Samaj Krantikarak Raja, Popular Prakashan, Mumbai.
Dr. Vimalkirti, (2008), Chhatrapati Shahuji: Sachitra Jeevani, Samyak Publication, New Delhi.
Khanna I.M., (2014), Indian Social Justice: A Case for Review, Partridge publishing India.