ವಸಾಹತು ಕಾಲದ ವಿಜಯಪುರ ಜಿಲ್ಲೆಯ ಆಡಳಿತ ಕಟ್ಟಡಗಳು ಮತ್ತು ಅವುಗಳ ಸಂರಕ್ಷಣೆ

Main Article Content

ಪಿ.ಬಿ. ಬಿರಾದಾರ್

Abstract

ವಸಾಹತು ಕಾಲದ ವಿಜಯಪುರ ಜಿಲ್ಲೆಯಲ್ಲಿ ಬ್ರಿಟಿಷರು ಆಡಳಿತಾತ್ಮಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಿದರು. 1848ರ ನಂತರ ಬ್ರಿಟಿಷರು ಜಿಲ್ಲೆಯನ್ನು ನೇರವಾಗಿ ಆಡಳಿತಕ್ಕೆ ತೆಗೆದುಕೊಂಡು, ಕಲಾದಗಿ ಜಿಲ್ಲೆಯಿಂದ ಜಿಲ್ಲಾ ಕೇಂದ್ರವನ್ನು ವಿಜಯಪುರಕ್ಕೆ ವರ್ಗಾಯಿಸುವುದರ ಮೂಲಕ ಇಲ್ಲಿನ ಕಟ್ಟಡಗಳ ದುರಸ್ತಿ ಕಾರ್ಯ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಿದರು. ಈ ಸಂದರ್ಭದಲ್ಲಿ ಆದಿಲ್‌ಶಾಹಿ ವಾಸ್ತುಕಲಾ ಸ್ಮಾರಕಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಹಾಗೂ ಆಡಳಿತ ಸೇವೆಗಳಿಗೆ ಬಳಸಿದರು. ಆಡಳಿತ ಕಚೇರಿಗಳು, ನ್ಯಾಯಾಲಯ, ಖಜಾನೆ, ಪೊಲೀಸ್ ಕಚೇರಿ ಸೇರಿದಂತೆ ಮುಂತಾದ ಸೇವೆಗಳನ್ನು ನಖರಖಾನಾ, ಅರಕಿಲ್ಲೆ, ಆಸರ್‌ ಮಹಲ್, ಮುಸ್ತಫ ಖಾನ್ ಸರಾಯಿ, ಅದಾಲತ್ ಮಹಲ್, ದೌಲಿಯಾ ಯಾಕೂತ್ ಮಹಲ್, ಚೀನಿ ಮಹಲ್, ಆನಂದ ಮಹಲ್ ಇತ್ಯಾದಿ ಕಟ್ಟಡಗಳನ್ನು ಬ್ರಿಟಿಷರು ಸರಿಪಡಿಸಿ ತಮ್ಮ ಆಡಳಿತ ಕಾರ್ಯಗಳಿಗೆ ಉಪಯೋಗಿಸಿದರು. ಈ ಕಟ್ಟಡಗಳಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ವಾಸ್ತು ಶೈಲಿಯ ಸಂಯೋಜನೆ ಕಂಡುಬರುತ್ತದೆ. ಬ್ರಿಟಿಷರು ನಿರಂತರ ದುರಸ್ತಿ, ಪ್ರವೇಶ ನಿಯಂತ್ರಣ, ಭದ್ರತಾ ಕ್ರಮ, ದಾಖಲೆ ತಯಾರಿ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಈ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯನ್ನು ಮುಂದುವರೆಸಿದರು. ಈ ಕಾರ್ಯಗಳಿಂದ ವಿಜಯಪುರದ ವಾಸ್ತುಶಿಲ್ಪ, ಆಡಳಿತ ಪರಂಪರೆ ಮತ್ತು ಸಾಮಾಜಿಕ ಇತಿಹಾಸವನ್ನು ಅಧ್ಯಯನ ಮಾಡಲು ಅನುಕೂಲವಾಯಿತು. ಈ ವಿಷಯದಲ್ಲಿ ನಾವು ಬ್ರಿಟಿಷರಿಗೆ ಋಣಿಯಾಗಿದ್ದೇವೆ.

Article Details

Section

Research Articles

Author Biography

ಪಿ.ಬಿ. ಬಿರಾದಾರ್

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಿಜಯಪುರ.

 

References

Centenary Souvenir Bijapur Municipality 1854-1954 Page No. 32

Dr. Imaratwale., Bijapur Subha Page No. 344

Centenary Souvenir Bijapur Municipality 1854-1954 Page No. 32

Dr. Imaratwale., Bijapur Subha Page No. 335

Dr. Imaratwale., Bijapur Subha Page No. 337

Henry Cousins., Bijapur And It’s Architectural Remains - Page No. 100

Centenary Souvenir Bijapur Municipality 1854-1954 Page No. 4

Centenary Souvenir Bijapur Municipality 1854-1954 Page No. 32

Dr. Imaratwale ., Bijapur Subha Page No. 344

Imaratwale ., Bijapur Subha Dr. Page No. 342-343