ವಚನ ಸಾಹಿತ್ಯದಲ್ಲಿ ಬಂಡಾಯ ಮನೋಧೋರಣೆ

Main Article Content

ಸಂಗಮೇಶ ಎಸ್. ಗಣಿ

Abstract

ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವು ಮೂಲತಃ ಅಂದಿನ ಸಮಾಜದಲ್ಲಿದ್ದ ಜಡತ್ವ, ಶೋಷಣೆ ಮತ್ತು ವೈದಿಕ ಪರಂಪರೆಯ ವಿರುದ್ಧ ಹುಟ್ಟಿಕೊಂಡ ಬಂಡಾಯದ ದನಿಯಾಗಿದೆ. ವಚನಕಾರರು ಡಾಂಭಿಕ ಭಕ್ತಿ, ಅಂಧಶ್ರದ್ಧೆ, ಮತ್ತು ಪುರೋಹಿತಶಾಹಿಯ ಆಚರಣೆಗಳನ್ನು ಕಟುವಾಗಿ ವಿಮರ್ಶಿಸಿದರು. ಅಂತರಂಗದ ಶೋಧನೆ ಮತ್ತು ಆತ್ಮವಿಮರ್ಶೆಯ ಮೂಲಕ ವೈಯಕ್ತಿಕ ಮಿತಿಗಳನ್ನು ಮೀರಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಧಾರಿತ ಸಮಸಮಾಜ ನಿರ್ಮಾಣದತ್ತ ಶರಣರು ಹೆಜ್ಜೆ ಹಾಕಿದರು. ಮನುಷ್ಯನೊಳಗಿನ ಸಾತ್ವಿಕ ಬಂಡಾಯವು ಸಾಮುದಾಯಿಕ ಹೋರಾಟದ ಸ್ವರೂಪ ಪಡೆದುಕೊಂಡು ಸಾಮಾಜಿಕ ಮತ್ತು ಧಾರ್ಮಿಕ ಬದಲಾವಣೆಗೆ ಹೇಗೆ ಕಾರಣವಾಯಿತು ಎಂಬುದನ್ನು ಶರಣರ ವಚನಗಳ ಹಿನ್ನೆಲೆಯಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಸಂಗಮೇಶ ಎಸ್. ಗಣಿ

ಮುಖ್ಯಸ್ಥರು, ಕನ್ನಡ ವಿಭಾಗ, ಟಿ.ಎಂ.ಎ.ಇ.ಎಸ್. ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಕಾಲೇಜು, ಹೊಸಪೇಟೆ.

References

ಬಂಡಾಯ-ದಲಿತ ಸಾಹಿತ್ಯ (2021), ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ವಚನ ಕಮ್ಮಟ (2012), ಸಂ: ಕೆ.ಮರುಳಸಿದ್ದಪ್ಪ, ಕಿ.ರಂ. ನಾಗರಾಜ, ಸಪ್ನ ಬುಕ್ ಹೌಸ್, ಬೆಂಗಳೂರು.

ವಚನ ಸ್ವರೂಪ ಒಂದು ವಿವೇಚನೆ (2011), ಡಾ. ಪಿ.ವಿ. ನಾರಾಯಣ, ವಸಂತ ಎಂಟರಪ್ರೈಸಸ್, ಬೆಂಗಳೂರು.

ವಚನ ಸಾಹಿತ್ಯ ಮೀಮಾಂಸೆ (2007), ಡಾ. ವೀರಣ್ಣ ದಂಡೆ, ಬಸವ ಪ್ರಕಾಶನ.

ವಚನ ಸಾಹಿತ್ಯ: ವೈಚಾರಿಕ ಅಧ್ಯಯನ (2004), ಡಾ. ತಿಪ್ಪೇರುದ್ರಸ್ವಾಮಿ, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.