ಭಾಷಾ ಶಿಕ್ಷಣದಲ್ಲಿ ಸಾಹಿತ್ಯದ ಪಾತ್ರ

Main Article Content

ಸುಕನ್ಯಾ ಅಪ್ಪಾರಾಯ ಗೋಂದಳಿ

Abstract

ವಿವಿಧ ಹಂತದ ಭಾಷಾ ಶಿಕ್ಷಣದಲ್ಲಿ ಸಾಹಿತ್ಯ ಕೃತಿಗಳ ಅಳವಡಿಕೆಯಾಗುತ್ತಿದೆ. ಭಾಷಾ ಶಿಕ್ಷಣದಲ್ಲಿ ಸಾಹಿತ್ಯದ ಬಳಕೆ ಬೇಕೇ ಬೇಡವೇ ಎಂಬ ಜಿಜ್ಞಾಸೆಗೆ ಕೆಲವು ದೃಷ್ಟಿಕೋನಗಳು ಸಮರ್ಥನೆ ಒದಗಿಸಬಲ್ಲವು. ಒಂದು ಮಗುವಿನಿಂದ ಹಿಡಿದು ಒಬ್ಬ ಪ್ರಬುದ್ಧ ವ್ಯಕ್ತಿಯವರೆಗೆ ಬದುಕಿನ ಈ ಪ್ರಪಂಚದ ಎಲ್ಲಾ ಅನುಭವಗಳನ್ನು ಅರ್ಥೈಸಿಕೊಳ್ಳಲು ಇರುವ ಮಾಧ್ಯಮ ಭಾಷೆ. ಭಾಷೆ ಶಿಕ್ಷಣದ ಕಲಿಕೆಯ ತಳಪಾಯ ಎನ್ನುವುದಾದರೆ ಭಾಷೆಯನ್ನು ಕಲಿಯುವ ಪರಿಣಾಮಕಾರಿ ವಿಧಾನಗಳು ಹಾಗೂ ತಂತ್ರಗಳೇನು? ತಂತ್ರಗಳಲ್ಲಿ ಸಾಹಿತ್ಯವು ಒಂದು ಪ್ರಧಾನ ಅಂಶವನ್ನು ಹೊಂದಿದೆಯೇ? ಒಟ್ಟಿನಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಶಿಕ್ಷಣದಲ್ಲಿ ಹಾಗೂ ಅದರ ಅವಿಭಾಜ್ಯ ಅಂಗವಾದ ಭಾಷಾ ಕಲಿಕೆಯಲ್ಲಿ ಸಾಹಿತ್ಯಕ್ಕೆ ಇರುವ ಸ್ಥಾನವನ್ನು ರಾಷ್ಟ್ರೀಯ ಪಠ್ಯಕ್ರಮ 2005ರಲ್ಲಿ ಪ್ರಸ್ತಾಪಗಳು ಮುನ್ನಲೆಗೆ ತರುತ್ತವೆ.

Article Details

Section

Research Articles

Author Biography

ಸುಕನ್ಯಾ ಅಪ್ಪಾರಾಯ ಗೋಂದಳಿ

ಬಿ. ಎ. ಮೂರನೇ ಸೆಮಿಸ್ಟರ್, ಎಸ್.ಎಸ್.ಎಮ್.ಎಸ್. ಕಾಲೇಜು, ಅಥಣಿ.

 

How to Cite

ಸುಕನ್ಯಾ ಅಪ್ಪಾರಾಯ ಗೋಂದಳಿ. (2025). ಭಾಷಾ ಶಿಕ್ಷಣದಲ್ಲಿ ಸಾಹಿತ್ಯದ ಪಾತ್ರ. ಅಕ್ಷರಸೂರ್ಯ (AKSHARASURYA), 8(01), 206 to 211. https://aksharasurya.com/index.php/latest/article/view/1377

References

ವೆಂಕಟಸುಬ್ಬಯ್ಯ ಬಿ., (2011), ಸಾಹಿತ್ಯ ಮತ್ತು ಶಿಕ್ಷಣ, ಪ್ರಿಸ್ಮಾ ಬುಕ್ ಪ್ರಾ. ನಿ, ಬೆಂಗಳೂರು.

ಗೋಪಾಲಕೃಷ್ಣ ಅಡಿಗ, (2023), ಸಮಗ್ರ ಕಾವ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.

ಕುವೆಂಪು, (2024), ಪಕ್ಷಿಕಾಶಿ, ಉದಯರವಿ ಪ್ರಕಾಶನ, ಮೈಸೂರು.

ಬೋಳುವಾರು ಮಹಮ್ಮದ ಕುಂಞ, (1991), ತಟ್ಟು ಚಪ್ಪಾಳೆ, ದಿವ್ಯಾ ಪ್ರಕಾಶನ, ಬೆಂಗಳೂರು.

ಶಿಕ್ಷಣ ಸಚಿವಾಲಯ, (2020), ರಾಷ್ಟ್ರೀಯ ಶಿಕ್ಷಣ ನೀತಿ 2020, ಭಾರತ ಸರ್ಕಾರ, ನವ ದೆಹಲಿ.