ನೀತಿಬೋಧಕ ಸಾಹಿತ್ಯದ ಅಧ್ಯಯನದಲ್ಲಿ ಸಂಸ್ಕೃತ ಭಾಷೆಯ ಪ್ರಾಮುಖ್ಯತೆ
Main Article Content
Abstract
ಸಂಸ್ಕೃತವು ಭಾರತದ ಪುರಾತನ ಮತ್ತು ಶಾಸ್ತ್ರೀಯ ಭಾಷೆಯಾಗಿದ್ದು, ಇದು ಭಾರತೀಯ ಸಾಹಿತ್ಯ, ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಗ್ರಂಥಗಳ ಮೂಲವಾಗಿದೆ. ಋಗ್ವೇದದಂತಹ ವಿಶ್ವದ ಮೊದಲ ಗ್ರಂಥಗಳು ಇದರಲ್ಲಿ ರಚಿಸಲ್ಪಟ್ಟಿವೆ. ವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಖಗೋಳಶಾಸ್ತ್ರ, ನೀತಿಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿನ ಭಾರತೀಯ ಪ್ರಗತಿಗೆ ಸಂಸ್ಕೃತವೇ ಅಡಿಪಾಯವಾಯಿತು. ಅಲ್ಲದೇ ಆಧುನಿಕ ಭಾರತೀಯ ಭಾಷೆಗಳ ಶಬ್ದಕೋಶಕ್ಕೆ ಸಂಸ್ಕೃತವು ಕೊಡುಗೆ ನೀಡಿದೆ.ಇದು ಇಂದಿಗೂ ಕೆಲವು ಧಾರ್ಮಿಕ ಆಚರಣೆಗಳಲ್ಲಿ ಮತ್ತು ಶೈಕ್ಷಣಿಕ ವಲಯಗಳಲ್ಲಿ ಬಳಕೆಯಲ್ಲಿದೆ. ಸಂಸ್ಕೃತವು ವೇದಗಳು, ಉಪನಿಷತ್ತುಗಳು, ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ರಚನೆಗೆ ಕಾರಣವಾಯಿತು. ಇದು ಭಾರತೀಯ ಜ್ಞಾನದ ಭಂಡಾರವಾಗಿದ್ದು, ಆಳವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಚಿಂತನೆಗಳಿಗೆ ಅಡಿಪಾಯ ಹಾಕಿದೆ. ಸಂಸ್ಕೃತವು ಗಣಿತ, ಖಗೋಳಶಾಸ್ತ್ರ (ಉದಾಹರಣೆಗೆ ಆರ್ಯಭಟನ ಆರ್ಯಭಟೀಯ) ಮತ್ತು ವೈದ್ಯಕೀಯ (ಉದಾಹರಣೆಗೆ ಸುಶ್ರುತ ಸಂಹಿತೆ) ಕ್ಷೇತ್ರಗಳಲ್ಲಿನ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಹಾಯ ಮಾಡಿತು. ಸಂಸ್ಕೃತವು ಹಲವಾರು ಭಾರತೀಯ ಭಾಷೆಗಳಿಗೆ ತಾಯಿಯೆಂದು ಪರಿಗಣಿಸಲಾಗಿದೆ. ಇದು ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳ ಶಬ್ದಕೋಶಕ್ಕೆ ಪದಗಳನ್ನು ಒದಗಿಸಿದ್ದು ಹೊಸ ತಾಂತ್ರಿಕ ಪದಗಳನ್ನು ರೂಪುಗೊಳಿಸಲು ಸಹಾಯ ಮಾಡಿದೆ. ಸಂಸ್ಕೃತವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಪೂಜಾ ವಿಧಾನಗಳಲ್ಲಿ ಇದು ಇಂದಿಗೂ ಬಳಕೆಯಲ್ಲಿದೆ. ಸಂಸ್ಕೃತವು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ವಿಶ್ವಮಾನ್ಯತೆ ಗಳಿಸಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಿನೋಯ್ ಕುಮಾರ್ ಸರ್ಕಾರ್, (1975), ಶುಕ್ರನೀತಿ, ಮುನ್ಶಿರಾಂ ಮನೋಹರಲಾಲ್ ಪಬ್ಲಿಷರ್ಸ್, ನವದೆಹಲಿ.
ಗಜೇಶ್ವರ ಚೌಧರಿ, (2024), ವಿದುರ ನೀತಿ, ಚೌಖಂಬಾ ಕೃಷ್ಣದಾಸ ಅಕಾಡೆಮಿ, ವಾರಾಣಸಿ.