ತೊಗಟವೀರ ಕ್ಷತ್ರಿಯ ಮತ್ತು ಕನ್ನಡ ದೇವಾಂಗ ಸಮುದಾಯಗಳ ಆಚರಣೆಗಳಲ್ಲಿನ ಸಾಮ್ಯತೆ ಮತ್ತು ಭಿನ್ನತೆ

Main Article Content

ಮೋಹನ್‌ ಕುಮಾರ್‌ ಆರ್.

Abstract

ಭಾರತವು ಹಲವು ವಿಷಯಗಳಲ್ಲಿ ವೈವಿಧ್ಯತೆಯ ರಾಷ್ಟ್ರವಾಗಿದ್ದು, ಭಾರತದಲ್ಲಿರುವಷ್ಟು ಸಮುದಾಯಗಳು ಪ್ರಪಂಚದ ಬೇರೆ ಯಾವ ದೇಶಗಳಲ್ಲೂ ಕಾಣಸಿಗುವುದಿಲ್ಲ. ಎಲ್ಲಾ ಸಮುದಾಯಗಳಲ್ಲಿ ಜಾತಿ, ಉಪಜಾತಿಗಳಿದ್ದು ಅವುಗಳೊಳಗೆ ಆಚಾರ-ವಿಚಾರಗಳಲ್ಲಿ ಹಲವಾರು ಸಾಮ್ಯತೆಗಳಿದ್ದರೂ ಭಿನ್ನತೆಗಳು ಸಾಕಷ್ಟಿವೆ. ಸಮುದಾಯಗಳೊಳಗೆ ಆಹಾರಪದ್ಧತಿ, ಶಾಸ್ತ್ರ-ಸಂಪ್ರದಾಯಗಳ ಆಚರಣೆಗಳಲ್ಲಿರುವ ವಿಶಿಷ್ಟತೆ ಮತ್ತು ಭಿನ್ನತೆಗಳು ಹಲವು ಬಗೆಯ ಅಧ್ಯಯನಕ್ಕೆ ಎಡೆಮಾಡಿಕೊಟ್ಟಿವೆ. ಕರ್ನಾಟಕದಲ್ಲಿ ಹಲವಾರು ಧರ್ಮಗಳನ್ನು ಅನುಸರಿಸುವ ಜನಸಮುದಾಯಗಳಿದ್ದು, ಹಿಂದೂ ಧರ್ಮದ ಹಲವಾರು ಸಮುದಾಯಗಳಲ್ಲಿರುವ ಆಹಾರಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ತೌಲನಿಕ ಅಧ್ಯಯನವು ವ್ಯಕ್ತಿಯ ಅಸ್ಮಿತೆಯ ಕಾರಣಕ್ಕಾಗಿ ಮುಖ್ಯವೆನಿಸುತ್ತದೆ.

Article Details

Section

Research Articles

Author Biography

ಮೋಹನ್‌ ಕುಮಾರ್‌ ಆರ್.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

 

References

ಮಹದೇವ ಸಿ. (ಸಂ), (2014), ನೇಕಾರ ಸಮಾಜ: ಸಂಸ್ಕೃತಿ ಆರ್ಥಿಕ ಸ್ಥಿತಿಗತಿ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವಿಠ್ಠಪ್ಪ ಗೊರಂಟ್ಲಿ, (2017), ಪದ್ಮಶಾಲಿ ಸಮಾಜ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.