ಶತಕಗೈದ ತಡಹಾಳ ಸಹಕಾರಿ ಸಂಘ

Main Article Content

ಬಸವರಾಜ ಬಾರಕೇರ

Abstract

ಜನರ ಸೇವೆಯೇ ಜನಾರ್ಧನನ ಸೇವೆ ಎಂಬಂತೆ ಪ್ರಾಚೀನ ಕಾಲದಿಂದಲೂ ಭಾರತ ಸೇವೆಯಲ್ಲಿ ಎತ್ತಿದ ಕೈ. ಅಂತೆಯೇ ಕರ್ನಾಟಕದಲ್ಲಿಯೂ ಕೂಡಾ ಸಹಕಾರ ಸಂಘಗಳು ಸ್ವಾತಂತ್ರ್ಯಪೂರ್ವದಿಂದಲೂ ಸೇವೆಗೆ ಸಿದ್ಧವಾಗಿವೆ. ಅನೇಕ ಬಡ ಮತ್ತು ಮಧ್ಯಮ ವರ್ಗದ ಜನರು ಹಾಗೂ ಅಂಚೀಕರಣಗೊಂಡ ಸಮೂಹಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಇಡೀ ಭಾರತದಲ್ಲಿಯೇ ಪ್ರಥಮ ಕೃಷಿಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಯಿತು. ರೈತರ ಏಳಿಗೆ ಬಯಸಲು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ 1922ರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಸ್ಥಾಪನೆಯಾಯಿತು. ಇಂದು ಅನೇಕ ರೀತಿಯ ಆರ್ಥಿಕ ಸಾಮಾಜಿಕ ಸರಕಾರಿ ಯೋಜನೆಗಳ ಸಹಾಯವನ್ನು ಗ್ರಾಮೀಣ ಜನರಿಗೆ ನೀಡುವಲ್ಲಿ ಯಶಸ್ವಿಯಾದ ಕೃಷಿಪತ್ತಿನ ಸಹಕಾರಿ ಸಂಘದ ಕುರಿತಾದ ಮಾಹಿತಿ ಪ್ರಸ್ತುತ ಲೇಖನದಲ್ಲಿದೆ. 

Article Details

Section

Research Articles

Author Biography

ಬಸವರಾಜ ಬಾರಕೇರ

ಸಮಾಜಶಾಸ್ತ್ರ ಉಪನ್ಯಾಸಕರು, ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಮುಧೋಳ.

References

ಶಂಕರರಾವ್ ಚ.ನ., (2015), ಸಮಾಜಶಾಸ್ತ್ರ ಪರಿಚಯ, ಜೈ ಭಾರತ ಪ್ರಕಾಶನ, ಮಂಗಳೂರು.

ಶಂಕರರಾವ್ ಚ.ನ., (2013), ಸಮಾಜಶಾಸ್ತ್ರ ಮೂಲತತ್ವಗಳು: ಸಂಪುಟ-1, ಜೈ ಭಾರತ ಪ್ರಕಾಶನ, ಮಂಗಳೂರು.

ಶಂಕರರಾವ್ ಚ.ನ., (2023), ಅಂಚೀಕರಣಗೊಂಡ ಸಮೂಹಗಳ ಸಮಾಜಶಾಸ್ತ್ರ, ಜೈ ಭಾರತ ಪ್ರಕಾಶನ, ಮಂಗಳೂರು.