ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಹಬ್ಬಗಳ ಮಹತ್ವ
Main Article Content
Abstract
ಭರತಭೂಮಿಯನ್ನು ಹಬ್ಬಗಳ ನಾಡು ಎಂದು ಕರೆಯಬಹುದಾಗಿದೆ. ಗ್ರಾಮೀಣ ಹಬ್ಬಗಳ ರಾಷ್ಟ್ರವಾಗಿರುವುದರಿಂದ ಋತುಮಾನ, ಸುಗ್ಗಿ, ಮಳೆ ಮತ್ತು ಹುಣ್ಣಿಮೆಯಂತಹ ದಿನಗಳಲ್ಲಿ ಹಬ್ಬಗಳನ್ನು ಹರುಷದಿಂದ ಆಚರಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳ ಸಮ್ಮಿಲನಗೊಂಡಿರುವ ಈ ನಾಡಿನಲ್ಲಿ ಕಾಲಮಾನಕ್ಕನುಸಾರ ಇಲ್ಲಿಯ ಜನರು ಮಣ್ಣನ್ನೇ ನಂಬಿ, ಮಣ್ಣೇ ದೇವರೆಂದು ಬಗೆದು ದೈವತ್ವದ ಭಾವದಲ್ಲಿ ಬದುಕುತ್ತಿದ್ದಾರೆ. ಮಣ್ಣಿನೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದಂತಹ ನಮ್ಮ ಜನಪದರು ಕಾರಹುಣ್ಣಿಮೆ, ಗುಳ್ಳವ್ವನ ಪೂಜೆ, ನಾಗರಪಂಚಮಿ, ಗಣೇಶ ಚವತಿ, ಜೋಕುಮಾರ, ವಿಜಯದಶಮಿ, ಶಿಗವ್ವ-ಗೌರವ್ವ, ದೀಪಾವಳಿ, ಭಾರತ ಹುಣ್ಣಿಮೆ, ಶಿವರಾತ್ರಿ, ಹೋಳಿ ಹುಣ್ಣಿಮೆಯಂತಹ ಹಬ್ಬಗಳನ್ನು ಆಚರಣೆಗೈಯುತ್ತಾ ಬಂದಿರುವ ನಾಡಿನ ಭವ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರಸ್ತುತ ಲೇಖನ ಪ್ರಚುರಪಡಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಹಲಸಂಗಿ ಮಧುರಚೆನ್ನರು ಮತ್ತು ಗೆಳೆಯರು (ಸಂ), (1990), ಗರತಿಯ ಹಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಪು.ಸಂ. 49
ಯಜ್ಞನಾರಾಯಣ ಉಡುಪ, (2003), ಭಾರತ ಚೂಡಾಮಣಿ, ಜನಪ್ರೀಯ ಪುಸ್ತಕ ಮಾಲೆ, ಬೆಂಗಳೂರು, ಪು.ಸಂ. 217
ಪ್ರಕಾಶ ಖಾಡೆ, (2024), ಗ್ರಾಮ್ಯ, ಖಾಡೆ ಪ್ರಕಾಶನ, ಬಾಗಲಕೋಟೆ, ಪು.ಸಂ. 153
ಅಂಬಳಿಕೆ ಹಿರಿಯಣ್ಣ, (2001), ನಮ್ಮ ಜಾನಪದ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಪು.ಸಂ. 116