ತತ್ವಪದಗಳ ಪ್ರಾಯೋಗಿಕ ನೆಲೆಗಳು
Main Article Content
Abstract
ಕನ್ನಡ ಸಾಹಿತ್ಯದಲ್ಲಿ ತತ್ವಪದ ಸಾಹಿತ್ಯವು ಒಂದಾಗಿದ್ದು, 18 ಮತ್ತು 19 ನೇ ಶತಮಾನದ ಕಾಲಾವಧಿಯನ್ನು ʼತತ್ವಪದ ಸಾಹಿತ್ಯದ ಸುವರ್ಣಯುಗ’ವೆಂದು ಕರೆಯಲಾಗಿದೆ. ನಿಜಗುಣ ಶಿವಯೋಗಿ, ಸರ್ಪಭೂಷಣ, ಸಂತ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪನಂತವರು ತತ್ವಪದ ಸಾಹಿತ್ಯವನ್ನು ಬೆಳಸಿಕೊಂಡು ಬಂದಿದ್ದಾರೆ. ಇದೊಂದು ನಡೆ-ನುಡಿಯ ಪರಂಪರೆಯಾಗಿದೆ. ಇಲ್ಲಿನ ತತ್ವಪದಗಳು ಏಕತಾರಿ, ಭಜನೆ, ಜಾನಪದ ಹಾಗೂ ಸಂಗೀತದ ಮಾದರಿಯಲ್ಲಿ ಹಾರ್ಮೋನಿಯಂ, ತಾಳ, ಡಗ್ಗಾ, ತಬಲ, ದಮ್ಮಡಿ ಮುಂತಾದ ವಾದ್ಯ ಪರಿಕರಗಳಿಂದ ತತ್ವಪದಗಳು ಪ್ರಯೋಗಗೊಳ್ಳುತ್ತಾ ಬಂದಿವೆ. ಪ್ರಸ್ತುತ ಲೇಖನದಲ್ಲಿ ತತ್ವಪದಗಳು ಏಕತಾರಿ ಹಾಡು, ಭಜನಾಪದಗಳಾಗಿ ವೃತ್ತಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಮೂಲಕ ಪ್ರಯೋಗಗೊಳ್ಳುವ ಬಗೆಯ ಕುರಿತಾಗಿ ಪ್ರಸ್ತುತಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಮರೇಶ ನುಗಡೋಣಿ, (2014), ತತ್ವಪದ ಸಾಹಿತ್ಯ ಅಧ್ಯಯನ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಆನಂದಮೂರ್ತಿ ಜಿ.ವಿ., (1998), ತತ್ವಪದಕಾರರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಶಿವಾನಂದ ಗುಬ್ಬಣ್ಣವರ (ಸಂ), (2017), ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ: ಸಂಪುಟ-02, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.
ರಹಮತ್ ತರೀಕೆರೆ & ಅರುಣ ಜೋಳದಕೂಡ್ಲಗಿ (ಸಂ), (2017), ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ: ಸಂಪುಟ- 01, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.