ಕನ್ನಡದಲ್ಲಿ ಕಾವ್ಯಲಕ್ಷಣ ಗ್ರಂಥಗಳು
Main Article Content
Abstract
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾವ್ಯಮೀಮಾಂಸೆ ಮತ್ತು ಕಾವ್ಯಲಕ್ಷಣ ಗ್ರಂಥಗಳ ಉಗಮ, ವಿಕಾಸ ಹಾಗೂ ಐತಿಹಾಸಿಕ ಮಹತ್ವವನ್ನು ಪ್ರೊ. ತೀ.ನಂ. ಶ್ರೀಕಂಠಯ್ಯನವರ ಬರಹಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಕ್ರಿ.ಶ. ಒಂಬತ್ತನೇ ಶತಮಾನದ 'ಕವಿರಾಜಮಾರ್ಗ'ದಿಂದ ಪ್ರಾರಂಭಿಸಿ ಹತ್ತೊಂಬತ್ತನೇ ಶತಮಾನದವರೆಗಿನ ಅನೇಕ ಲಕ್ಷಣ ಗ್ರಂಥಗಳ ವಿವೇಚನೆ ಇಲ್ಲಿದೆ. ನಾಗವರ್ಮನ 'ಕಾವ್ಯಾವಲೋಕನ', ಸಾಳ್ವನ 'ರಸರತ್ನಾಕರ', ಕವಿಕಾಮನ 'ಶೃಂಗಾರರತ್ನಾಕರ' ಮತ್ತು ತಿರುಮಲಾರ್ಯನ 'ಅಪ್ರತಿಮವೀರಚರಿತ' ಮುಂತಾದ ಪ್ರಮುಖ ಕೃತಿಗಳು ಅಲಂಕಾರ, ರಸ, ಮತ್ತು ಧ್ವನಿ ಸಿದ್ಧಾಂತಗಳಿಗೆ ನೀಡಿದ ಕೊಡುಗೆಗಳನ್ನು ದಾಖಲಿಸಲಾಗಿದೆ. ಸಂಸ್ಕೃತ ಕಾವ್ಯಮೀಮಾಂಸೆಯ ಪ್ರಭಾವದ ನಡುವೆಯೂ ಕನ್ನಡ ಲಕ್ಷಣ ಗ್ರಂಥಗಳು ಬೆಳೆದುಬಂದ ವಿಶಿಷ್ಟ ಬಗೆಯನ್ನು ಕಟ್ಟಿಕೊಡಲಾಗಿದೆ. ಪ್ರಾಚೀನ ಕೃತಿಗಳೊಂದಿಗೆ ತೀ.ನಂ.ಶ್ರೀ ಅವರ 'ಭಾರತೀಯ ಕಾವ್ಯ ಮೀಮಾಂಸೆ' ಕೃತಿಯು ಕನ್ನಡ ಶಾಸ್ತ್ರ ಪರಂಪರೆಗೆ ನೀಡಿದ ಸಾರ್ಥಕ ಕೊಡುಗೆಯನ್ನೂ ಇದು ಎತ್ತಿತೋರಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.