ಜನ್ನನ ಯಶೋಧರೆ ಚರಿತೆಯಲ್ಲಿ ಅಮೃತಮತಿ ಮತ್ತು ಅಷ್ಟಾವಂಕನ ಪ್ರೇಮಾಂಕುರ: ಒಂದು ಅಧ್ಯಯನ
Main Article Content
Abstract
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜನ್ನ ಕವಿಯು ವಿಶಿಷ್ಟವಾಗಿ ಕಂಡುಬರುತ್ತಾನೆ.ಯಶೋಧರ ಚರಿತೆ ಕೃತಿಯಲ್ಲಿ ಕೃತಿಯಲ್ಲಿ ದೈಹಿಕ,ಮಾನಸಿಕ ಮತ್ತು ತಾರ್ಕಿಕ ಚಿಂತನೆಗಳು ಅಭಿವ್ಯಕ್ತಗೊಂಡಿವೆ. ಸೌಂದರ್ಯ ಮತ್ತು ಕುರೂಪತೆಯ ಅವಳಿ ವೈರುಧ್ಯಗಳು ವಿಭಿನ್ನತೆಯ ನೆಲೆಯಲ್ಲಿ ಚಿತ್ರಿತಗೊಂಡಿವೆ. ಪ್ರೀತಿಯಿಂದ ವಂಚಿತಳಾದ ರಾಣಿಯು ಸಾಮಾನ್ಯನ ಸಂಗೀತಕ್ಕೆ ಮನಸೋತು ಇಡೀ ಸರ್ವಸ್ವವನ್ನೇ ತ್ಯಾಗ ಮಾಡಿ ಅಷ್ಟವಂಕನಲ್ಲಿ ಬರುತ್ತಾಳೆ. ಆತನು ನೀಡುವ ಘೋರವಾದ ಶಿಕ್ಷೆ ಯಲ್ಲಿಯೂ ಆನಂದವನ್ನು ಪಡುತ್ತಾಳೆ.ಯಶೋಧರ ಮತ್ತು ಆತನ ಪೂರ್ವಜರು ಮಾಡಿದ ಪಾಪದ ಪ್ರತಿಫಲವಾಗಿ ಹಲವಾರು ಜನ್ಮಗಳನ್ನು ಎತ್ತಿ ಬಂದರು ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಎದುರಿಸಬೇಕಾಯಿತು. ಅಹಿಂಸ ಪಾಲಕರಾಗಿದ್ದರು ಯಾವುದೋ ರೂಪದಲ್ಲಿ ಅವರಿಗೆ ಅರಿವು ಇಲ್ಲದೆಯೇ ಹಿಂಸೆಯನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುವಂತೆ ವಿಧಿಯಾಟವು ಅವರ ಜೀವನದಲ್ಲಿ ನಡೆಯುತ್ತದೆ, ಎಂಬುದನ್ನು ಕವಿಯು ಚಿಂತನೆ ಮಾಡಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ತೆಕ್ಕುಂಜ ಗೋಪಾಲಕೃಷ್ಣ ಭಟ್ಟ. (೨೦೧೫). ಜನ್ನ ಕವಿಯ ಯಶೋಧರ ಚರಿತೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಶಿವರುದ್ರಪ್ಪ ಜಿ. ಎಸ್. (೨೦೦೯). ಜಿ. ಎಸ್. ಶಿವರುದ್ರಪ್ಪ ಸಮಗ್ರ ಗದ್ಯ-೨. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
ತೀ.ನಂ.ಶ್ರೀ. (೨೦೦೬). ಸಮಗ್ರ ಗದ್ಯ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಮುಗಳಿ ರಂ. ಶ್ರೀ. (೨೦೧೨). ಕನ್ನಡ ಸಾಹಿತ್ಯ ಚರಿತ್ರೆ. ಗೀತಾ ಬುಕ್ ಹೌಸ್. ಮೈಸೂರು.
ಪುಟ್ಟಯ್ಯ ಬಿ. ಎಂ. (೨೦೧೦). ಸಂಶೋಧನೆ ತಾತ್ವಿಕ ಆಯಾಮಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.