ಅಲ್ಲಮನ ಕಾಯ ಸಿದ್ಧಾಂತ

Main Article Content

ಡಿ.ಆರ್.‌ ನಾಗರಾಜ್

Abstract

ಅಲ್ಲಮಪ್ರಭುವಿನ ವಚನಗಳ ಮೂಲಕ ಅನಾವರಣಗೊಳ್ಳುವ 'ಕಾಯ ಸಿದ್ಧಾಂತ'ವು ಕಾಶ್ಮೀರ ಶೈವ ಹಾಗೂ ಕೌಳ ತಾಂತ್ರಿಕ ಪರಂಪರೆಗಳಿಗೆ ಮುಖಾಮುಖಿಯಾದ ವಿಶಿಷ್ಟ ತಾತ್ವಿಕ ನೆಲೆಯಾಗಿದೆ. ಅಭಿನವಗುಪ್ತನಂತಹ ದಾರ್ಶನಿಕರು ಶರೀರ ಮತ್ತು ಕಾಮವನ್ನು ಆಧ್ಯಾತ್ಮಿಕ ಮುಕ್ತಿಯ ಮಾರ್ಗವೆಂದು ಪ್ರತಿಪಾದಿಸಿದರೆ, ಅಲ್ಲಮನು ಆ ವಿಚಾರವನ್ನು ತೀವ್ರವಾಗಿ ನಿರಾಕರಿಸುತ್ತಾನೆ. ಕಾಯವನ್ನು 'ಮಹಾಕದಳಿ' ಹಾಗೂ ಪಂಚೇಂದ್ರಿಯಗಳನ್ನು 'ವಿಷಯದ ಮಳೆ' ಎಂದು ರೂಪಕೀಕರಿಸುವ ಮೂಲಕ ಶರೀರದ ಮಿತಿಯನ್ನು ಅಲ್ಲಮ ಎಚ್ಚರಿಸುತ್ತಾನೆ. ಪೌರಾಣಿಕ ಮಾರ್ಗ, ಗಣಾಚಾರದ ಹಿಂಸೆ ಮತ್ತು ಚಾರಿತ್ರಿಕ ವಿಧಿವಿಧಾನಗಳನ್ನು ಧಿಕ್ಕರಿಸುವ ಪ್ರಭು, 'ಗುಹೇಶ್ವರ'ನೆಂಬ ನಿರಾಕಾರ ಬಯಲನ್ನು ಮಾತ್ರ ಸತ್ಯವೆಂದು ನಂಬುತ್ತಾನೆ. ತತ್ವ ಮತ್ತು ಕಾವ್ಯರೂಪಕಗಳ ಬಳಕೆಯ ಮೂಲಕ ಅಲ್ಲಮನು ಪ್ರಬಲ ದಾರ್ಶನಿಕ ವಾಗ್ವಾದವನ್ನು ಮಂಡಿಸುವ ಬಗೆಯನ್ನು ಡಿ.ಆರ್. ನಾಗರಾಜ್ ಅವರ ಈ ವಿಶ್ಲೇಷಣೆಯು ಕಟ್ಟಿಕೊಡುತ್ತದೆ.

Article Details

Section

Trodden Path

References

Gavine D. Flood, Body and Cosmology in Kashmir Saivism, Mellen Research University Press, Sanfrancico, 1993. P. 291

ಅಭಿನವಗುಪ್ತನ ʼತಂತ್ರಾಲೋಕʼದ ಪ್ರಥಮಾಹ್ನಿಕದಲ್ಲಿ ಬರುವ ಉಲ್ಲೇಖ ಹೀಗಿದೆ: “ವೇದ ಆದಿಯಿಂದ ಶ್ರೇಷ್ಠಶೈವಶಾಸ್ತ್ರ. ಶೈವದಲ್ಲೂ ಉತ್ತರ ಮತ್ತು ದಕ್ಷಿಣಾ ಪಥಗಳಿವೆ” ಅಭಿನವಗುಪ್ತ, ತಂತ್ರಾಲೋಕ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ, 1992. ಪು. 46

ಶೈವ ತಂತ್ರದಲ್ಲಿ ದಕ್ಷಿಣಾ ಮತ್ತು ವಾಮ (ಉತ್ತರ) ಎಂಬ ಪರಿಕಲ್ಪನೆಗಳು ರೂಪುಗೊಂಡ ಬಗೆಯನ್ನು ಅಭಿನವ ಗುಪ್ತನ ಮೇಲೆ ಮುಖ್ಯ ಪುಸ್ತಕವೊಂದನ್ನು ಬರೆದಿರುವ ಕೆ.ಸಿ. ಪಾಂಡೆ ಹೀಗೆ ವಿವರಿಸುತ್ತಾರೆ: “ದಕ್ಷಿಣಾಪಥ ಎಂದು ಹೆಸರು ಬಂದಿರುವುದು, ಅದರ ಆಧಾರವಾದ ಆಗಮಗಳು ಅಘೋರನ ಮುಖದಿಂದ ಬಂದದ್ದರಿಂದ. ಅಘೋರನ ಮುಖ ದಕ್ಷಿಣಕ್ಕಿದೆ. ವಾಮಮಾರ್ಗ ಎಂದರೆ, ಉತ್ತರಕ್ಕೆ ಮುಖಮಾಡಿರುವ ವಾಮದೇವ ಮುಖದಿಂದ ಬಂದ ಶೈವಾಗಮಗಳ ಮೇಲೆ ಆಧರಿತವಾದದ್ದು” (ಕೆ.ಸಿ. ಪಾಂಡೆ, ಅಭಿನವಗುಪ್ತ, ಪು. 611)

ಪ್ರಭುವಿನ ವಚನಗಳಲ್ಲಿ ಬೇಟೆಯ ರೂಪಕಗಳಿಗೆ ನೋಡಿ: ವಚನ 557, 561, 408

ಅಭಿನವಗುಪ್ತ, ಪರಾತ್ರಿಂಶಿಕಾ ವಿವರಣಾ, ಅನು: ಜೈದೇವಸಿಂಹ, ಮೋತಿಲಾಲ್ ಬನಾರಸಿದಾಸ್‌, ದೆಹಲಿ, 1988. ಪು. 70

ಅದೇ. ಪು. 98

ಅದೇ. ಪು. 127-129

ಅದೇ. ಪು. 243

ಅದೇ. ಪು. 200

ಅದೇ. ಪು. 262-264

ಈ ಬಗೆಗೆ ನಾನು ಬೇರೆ ಕಡೆ ಚರ್ಚಿಸಿದ್ದೇನೆ. ನೋಡಿ - ʼದೈವಸಂಕರʼ, ನೀನಾಸಮ್ ಮಾತುಕತೆ, ಸಂ. 37, ಫೆಬ್ರವರಿ 1996

ಪ್ರ.ವ. ಪು. 290

ಪ್ರ.ವ. ಪು. 369

ಪ್ರ.ವ. ಪು. 368

ಪೆರಿಯಪುರಾಣಂ, ಸಂ. 2, ಅನು. ಡಾ. ಎ ಶಂಕರಕೆದಿಲಾಯ, ಮದುರೈ ವಿಶ್ವವಿದ್ಯಾಲಯ, 1980 ಪು. 108-111

ಪ್ರ.ವ. ಪು. 367

ಪ್ರ.ವ. ಪು. 368

ಪ್ರ.ವ. ಪು. 368

ಪ್ರ.ವ. ಪು. 374

ಪ್ರ.ವ. ಪು. 389