ಅನುಪಮಾ ನಿರಂಜನ ಮತ್ತು ತ್ರಿವೇಣಿಯವರ ಕಥೆಯಲ್ಲಿ ಮಹಿಳೆಯ ಪಾತ್ರ

Main Article Content

ರೇವತಿ ಬಿ. ಶಿರನಾಳ

Abstract

ನಮ್ಮ ನಾಡು ಸುಸಂಸ್ಕೃತವಾದ ತಾಣ ನಮ್ಮ ಮಹಾಕಾವ್ಯವಾದ “ರಾಮಾಯಣದಲ್ಲಿ” ಒಂದು ಶ್ಲೋಕ ಬರುತ್ತದೆ ಅದು “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂತ ಸಂಸ್ಕೃತ ಶ್ಲೋಕ ತಾತ್ಪರ್ಯ ನೋಡುವುದಾದರೆ “ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು” ಎಂದು ಅರ್ಥ. ಇದನ್ನು ಅರಿತ ಸ್ತ್ರೀ ನಮ್ಮ ಸಮಾಜದಲ್ಲಿ ಪುರುಷರಿಗೆ ಗೌರವಿಸುವುದು. ಒಂದು ಧರ್ಮ ಮತ್ತು ಕರ್ತವ್ಯ. ಹಾಗಾಗಿ ನಮ್ಮ ಸಮಾಜ ಪುರುಷ ಪ್ರಧಾನವಾಗಿ ನೋಡುತ್ತದೆ. ಸಹಜವಾಗಿ ಸ್ತ್ರೀಯು ಕೂಡಾ ಪ್ರಧಾನವಾಗಿ ನೋಡುವುದು ಅವಳ ವಿಶಾಲ ಮನೋಭಾವವಾಗುತ್ತದೆ. ಜೊತೆಗೆ ಕುಟುಂಬವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಆದ್ಯ ಕರ್ತವ್ಯಗಳನ್ನು ಈ ಕಥೆಗಳಲ್ಲಿ ನಾವು ಕಾಣುತ್ತೇವೆ. ತನ್ನ ಆಸೆ ಆಕಾಂಕ್ಷೆಗಳು ಬದಿಗೆ ಸರಿಸಿ ತನ್ನ ಪರಿವಾರವನ್ನು ಪ್ರೀತಿ, ಮಮತೆ, ವಾತ್ಸಲ್ಯದಿಂದ ಪಾಲಿಸುವ ಪೋಷಿಸುವ ಮಾತೃಮಯಿ ಸ್ತ್ರೀಯ ಕುರಿತು ಇರ್ವರು ಲೇಖಕಿಯರ ಕಥೆಗಳಲ್ಲಿ ಕಾಣುತ್ತೇವೆ.

Article Details

Section

Research Articles

References

ಕೃಷ್ಣ ಎಂ. ಜಿ. (2018). ಕನ್ನಡ ಸಾಹಿತ್ಯದ ಹಿನ್ನಲೆ ಪ್ರೇರಣೆ, ಪ್ರಭಾವ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ. ಮೈಸೂರು.

ಶಕುಂತಲಾ ದುರಗಿ (2019). ಮಹಿಳಾ ಸಾಹಿತ್ಯ ಮತ್ತು ಸಂವೇದನೆ.ಸಮನ್ವಯ ಪ್ರಕಾಶನ. ಮೈಸೂರು.