‘ತಮಂಧದ ಕೇಡು’ ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ

Main Article Content

ಮಾದಪ್ಪ ಜಿ.

Abstract

ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ.
ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್ವಿಕವಾಗಿ ಸಾಗುತ್ತ ಶೋಷಣೆಯನ್ನು ಪರಂಪರಾಗತ ಸಂಪ್ರದಾಯ ಎನ್ನುವಂತೆ ಒಪ್ಪಿಕೊಂಡಿವೆ. ‘ತಮಂಧದ ಕೇಡು’ ಕಥೆಯ ನಾಯಕ ಚೆನ್ನಮಲ್ಲಯ್ಯ ಉರುಫ್ ಚೆನ್ನ. ಕಥಾನಾಯಕಿ ಅಕ್ಕಮಹಾದೇವಿ ಉರುಫ್ ‘ಅಕ್ಕ’. ಈ ಎರಡು ಹೆಸರುಗಳು, ಕಥೆಗಾರರು ದೇಮ ಅವರಿಂದ ಪ್ರೇರಿತವಾಗಿರುವುದನ್ನು ಹಾಗೂ 12ನೇ ಶತಮಾನದ ಶರಣ ಚಳವಳಿಯಿಂದ ಪ್ರಭಾವಿತರಾಗಿರುವುದನ್ನು ಕಂಡರಿಸುತ್ತವೆ.
ಪ್ರತಿಭಟನಾತ್ಮಕ ಸಂಘರ್ಷ ಮತ್ತು ಸಾತ್ವಿಕ ಸಿಟ್ಟನ್ನು ಇಡೀ ಕಥೆಯಲ್ಲಿ ತರುವ ಮೂಲಕ ಅಮರೇಶ ನುಗಡೋಣಿ ದಲಿತ ಮತ್ತು ಲಿಂಗಾಯತ ಸಮುದಾಯದ ಸಾಮರಸ್ಯವನ್ನು ದುರುಗಾ ಮತ್ತು ಶಾಂತಗೌಡ ಪಾತ್ರಗಳ ಮೂಲಕ ಕಟ್ಟಿಕೊಡುತ್ತಲೇ ಚೆನ್ನ ಮತ್ತು ಅಕ್ಕಮಹಾದೇವಿ ಪಾತ್ರಗಳ ಮೂಲಕ ಜಾತಿ ವಿನಾಶದಂತ ಕ್ರಾಂತಿಯನ್ನು ಆಹ್ವಾನಿಸಿರುವುದು ಕಥೆಯನ್ನು ಗಟ್ಟಿಗೊಳಿಸುತ್ತದೆ.

Article Details

Section

Research Articles

Author Biography

ಮಾದಪ್ಪ ಜಿ.

ಉಪನ್ಯಾಸಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಡಿಕೇರಿ.

References

ಅಮರೇಶ ನುಗಡೋಣಿ. (2016). ತಮಂಧದ ಕೇಡು. ಪಲ್ಲವ ಪ್ರಕಾಶನ. ಚೆನ್ನಪಟ್ಟಣ.

ಶಾಮರಾಯ ತ. ಸು. (2017). ಕನ್ನಡ ಸಾಹಿತ್ಯ ಚರಿತ್ರೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.