ಮುಳುಗಡೆ ಗ್ರಾಮಗಳಲ್ಲಿನ ಕೃಷಿ ಸಂಬಂಧಿ ಆಚರಣೆಗಳು

Main Article Content

ಪವಾಡೆಪ್ಪ ವಿ. ಮನಗೂಳಿ

Abstract

ಮನುಷ್ಯನಿಗೆ ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಜೀವಿಸಲು ನೀರು ಕೂಡ ಮುಖ್ಯ. ಪ್ರಾಚೀನ ಕಾಲದಿಂದಲೂ ಮನುಷ್ಯ ತಾನು ಬದುಕಲು, ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ನದಿ ಮೂಲಗಳನ್ನೇ ಅವಲಂಬಿಸಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ಜಗತ್ತಿನ ಎಲ್ಲಾ ನಾಗರಿಕತೆಗಳು ನದಿ ಬಯಲು ಪ್ರದೇಶಗಳಲ್ಲಿಯೇ ಬೆಳೆದು ಬಂದಿವೆ. ನದಿಗಳು ಕೇವಲ ಹರಿಯುವ ಜಲರಾಶಿ ಮಾತ್ರವಲ್ಲದೆ ಸಜೀವ ಶಕ್ತಿವಾಹಿನಿಗಳಾಗಿ ನಮ್ಮ ಮುಂದಿವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಒಂದು ಕಾಲಕ್ಕೆ ಮನುಷ್ಯನ ಧಾರ್ಮಿಕ ಹಾಗೂ ಸಾಂಸ್ಕೃತಿಕತೆ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳು ಇಂದು ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ವಿವಿಧೋದ್ದೇಶ ನೀರಾವರಿ ಯೋಜನೆಗಳಿಗೆ ಆವಾಸ ಸ್ಥಾನಗಳಾಗಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರ ಜಾರಿಗೆ ತಂದ ಕೃಷ್ಣಾ ಮೇಲ್ದಂಡೆ ಯೋಜನೆಯು ಬಾಗಲಕೋಟೆ ಜಿಲ್ಲಾ ಭಾಗದಲ್ಲಿ ಹಲವಾರು ಬಗೆಯ ಸ್ಥಿತ್ಯಂತರಗಳನ್ನು ಸೃಷ್ಟಿಸಿದೆ. ಆ ಸ್ಥಿತ್ಯಂತರಗಳನ್ನು, ಅದರ ಹಿಂದಿನ ಬಹುಮುಖಿ ಆಯಾಮಗಳನ್ನು ಚಾರಿತ್ರಿಕ ನೆಲೆಯಲ್ಲಿ ಈ ಸಂಶೋಧನಾ ಲೇಖನದಲ್ಲಿ ಅಧ್ಯಯನ ಮಾಡಲಾಗಿದೆ.

Article Details

Section

Research Articles

Author Biography

ಪವಾಡೆಪ್ಪ ವಿ. ಮನಗೂಳಿ

ಮುಖ್ಯಸ್ಥರು, ಇತಿಹಾಸ ವಿಭಾಗ, ಬ.ವಿ.ವಿ.ಸಂಘದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ. 

References

ಕಿಲ್ಲೇದಾರ ಈರಯ್ಯ. (2004). ರೈತ ಪ್ರಹಸನಗಳು. ಆದಿತ್ಯ ಪ್ರಕಾಶನ. ಬೆಳಗಾವಿ.

ಹೊಸ ಪಾಳ್ಯ ಮಲ್ಲಿಕಾರ್ಜನ. (2008). ಕೃಷಿ ಆಚರಣೆ: ದೇಸಿ ಕೃಷಿ ಜ್ಞಾನ ಸಂಪುಟ-05. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

ರೇಷ್ಯಾ ಟಿ. ಬಿ. (2016). ಕೊಡಗು ಜಿಲ್ಲೆಯ ಬೇಸಾಯ ಪರಂಪರೆಗಳ ಅಧ್ಯಯನ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಚಿಂದಾನಂದ ಮೂರ್ತಿ ಎಂ. (2009). ಕನ್ನಡ ಸಂಸ್ಕೃತಿ ಹಿರಿಮೆ ಗರಿಮೆ. ಮಹಾಕವಿ ಹರಿಹರ ಸ್ಮಾರಕ ಸಂಶೋಧನೆ ಕೇಂದ್ರ. ಹೊಸಪೇಟೆ.

ಶ್ರೀಯಾನ್ ಕೆ. ಆರ್. (2019). ಕರ್ನಾಟಕದ ರೈತ ಚಳುವಳಿ. ಕ್ರಿಯಾ ಪ್ರಕಾಶನ. ಬೆಂಗಳೂರು.

ಯಶವಂತ್ ಕುಮಾರ್ ಚಾ. ನಾ. (2016). ಬುಡಕಟ್ಟು ವೃತ್ತಿ ಮತ್ತು ಪರಂಪರಿಕ ಜ್ಞಾನ. ಕನ್ನಡ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಡಿಸೋಜ ನಾ. (1985). ಮುಳುಗಡೆ. ರವೀಂದ್ರ ಪುಸ್ತಕಾಲಯ. ಬೆಂಗಳೂರು.

ಪುರಾಣಿಕ ಶ್ರೀರಂಗ. (2019). ಕೃಷ್ಣಾ ತೀರದ ಕನಸುಗಳು, ಪುರಾಣಿಕ ಪ್ರಕಾಶನ. ವಿಜಯಪುರ.

ಕೋಡಿರಾಂಪುರ ರಂಗಾರೆಡ್ಡಿ (ಸಂ). (200)3. ಕರ್ನಾಟಕ ಜಾನಪದ ಮತ್ತು ಯಕ್ಷಗಾನ. ಕನ್ನಡ ಸಾಹಿತ್ಯ ಅಕಾಡೆಮಿ. ಬೆಂಗಳೂರು.

ವೆಂಕಟರಾವ್‌ ಡಿ. (2007). ಕೃಷಿ ಬೆಳೆವಣಿಗೆ. ವಿದ್ಯಾನಿಧಿ ಪ್ರಕಾಶನ. ಗದಗ.

ಕರ್ನಾಟಕದ ಪರಂಪರೆ-II. (ಸಂ). (1992). ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ಕನ್ನಡ ವಿಷಯ ವಿಶ್ವಕೋಶ. (2006). ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು.