ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ
Main Article Content
Abstract
ಬುಡಕಟ್ಟು ಮತ್ತು ತಳಸಮುದಾಯದ ಮಹಿಳೆಯರ ಬದುಕು ಹಾಗೂ ಸಾಹಿತ್ಯವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಮುರಿದು, ಹೊಸ ವಿಶ್ಲೇಷಣಾ ವಿಧಾನವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಜನಪದ ಮತ್ತು ಬುಡಕಟ್ಟು ಕಾವ್ಯಗಳಾದ ಬೆಟ್ಟದ ಚಾಮುಂಡಿ, ಕೊರಾತಿ ಕಂಚಿ, ಈರಬಡಪ್ಪ ಹಾಗೂ ಜುಂಜಪ್ಪ ಕಾವ್ಯಗಳ ಉದಾಹರಣೆಗಳ ಮೂಲಕ ಬುಡಕಟ್ಟು ಮಹಿಳೆಯರ ಲೈಂಗಿಕತೆ, ತಾಯ್ತನ, ಬಂಜೆತನ ಮತ್ತು ಶ್ರಮದ ಮೇಲಿನ ಶೋಷಣೆಯ ವಾಸ್ತವಗಳನ್ನು ಅನಾವರಣಗೊಳಿಸಲಾಗಿದೆ. ಮಹಿಳೆಯರೆಲ್ಲರನ್ನೂ ಏಕಘಟಕವಾಗಿ ನೋಡುವ ಸ್ತ್ರೀವಾದಿ ಹಾಗೂ ಪಿತೃಪ್ರಧಾನ ನಿರೂಪಣೆಗಳನ್ನು ಪ್ರಶ್ನಿಸುತ್ತ, ಆಯಾ ಬುಡಕಟ್ಟು ಸಮುದಾಯಗಳ ಒಳಗೆ ಇರುವ ಲಿಂಗಸಂಬಂಧಿ ತಾರತಮ್ಯಗಳನ್ನು ಹಾಗೂ ಶೋಷಣೆಯ ಸಂರಚನೆಗಳನ್ನು ಸೂಕ್ಷ್ಮವಾಗಿ ಶೋಧಿಸಲಾಗಿದೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ವೈಭವೀಕರಣವನ್ನು ತಡೆದು, ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ತುರ್ತನ್ನು ಈ ಅಧ್ಯಯನವು ಒತ್ತಿಹೇಳುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕರಾಕೃ (ಸಂ). (೧೯೬೩). ಮೈಲಾರಲಿಂಗ ಈರಬಡಪ್ಪ. ಜನಪದ ಸಾಹಿತ್ಯ ಅಕಾಡೆಮಿ. ಮೈಸೂರು.
ಕಾಪಸೆ ರೇವಪ್ಪ (ಸಂ). (೨೦೦೦). ಹಲಸಂಗಿ ಹಾಡುಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಕೇಶವನ್ ಪ್ರಸಾದ್ (ಸಂ). (೧೯೯೯). ಮಲೆಮಾದೇಶ್ವರ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಕೇಶವ ಶರ್ಮ. (೧೯೯೮). ಶಬ್ದರೇಖೆ. ಅಭಿನವ ಪ್ರಕಾಶನ. ಬೆಂಗಳೂರು.
ಕೃಷ್ಣಮೂರ್ತಿ ಹನೂರು. (೧೯೯೮). ಜನಪದ ಮತ್ತು ಬುಡಕಟ್ಟು ಗೀತೆಗಳು. ಸಾಹಿತ್ಯ ಅಕಾಡೆಮಿ. ನವದೆಹಲಿ.
ಗಾಯಿತ್ರಿ ನಾವಡ. (೧೯೯೭). ವಿರಚನೆ. ಎನ್.ಆರ್.ಎ.ಎಂ.ಎಚ್. ಪ್ರಕಾಶನ. ಕೋಟೇಶ್ವರ.
ಚಲುವರಾಜು (ಸಂ). (೧೯೯೭). ಜುಂಜಪ್ಪ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ನಾಗರಾಜ್ ಡಿ. ಆರ್., ಮನು ಚಕ್ರವರ್ತಿ ಎನ್. (ಸಂ). (೧೯೯೩). ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯ ಸ್ವರೂಪ: ಸಮಸ್ಯೆಗಳು, ಸಾಧ್ಯತೆಗಳು. ಭಾರತೀಯ ಸ್ತ್ರೀವಾದ. ಅಕ್ಷರ ಚಿಂತನ. ಹೆಗ್ಗೋಡು.
ನಾಯಕ ಎನ್. ಆರ್. (೧೯೯೩). ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಬೋರಲಿಂಗಯ್ಯ ಹಿ. ಚಿ. (೨೦೦೨). ಹಾಲಕ್ಕಿ ಒಕ್ಕಲಿಗರ ಜ್ಞಾನ ಪರಂಪರೆ. ಸಿ.ವಿ.ಜಿ. ಪಬ್ಲಿಕೇಷನ್ಸ್. ಬೆಂಗಳೂರು.
ಬೋರಲಿಂಗಯ್ಯ ಹಿ. ಚಿ. (೧೯೯೫). ಕಾಡು, ಕಾಂಕ್ರೀಟು ಮತ್ತು ಜಾನಪದ. ಅಕ್ಷರ ಪ್ರಕಾಶನ. ಹೆಗ್ಗೋಡು.
ಭಟ್ ಎಲ್. ಜಿ. (೧೯೮೮). ಹಾಲಕ್ಕಿ ಒಕ್ಕಲಿಗರು. ಐಬಿಎಚ್ ಪ್ರಕಾಶನ. ಬೆಂಗಳೂರು.
ರಾಜಶೇಖರ ಪಿ. ಕೆ. (ಸಂ). (೧೯೭೨). ಬೆಟ್ಟದ ಚಾಮುಂಡಿ. ತ.ವೆಂ. ಸ್ಮಾರಕ ಗ್ರಂಥ ಮಾಲೆ. ಮೈಸೂರು.
ವಿಜಯಾದಬ್ಬೆ. ತೇಜಸ್ವಿ ನಿರಂಜನ & ಸೀಮಂತಿನಿ ನಿರಂಜನ (ಸಂ). (೧೯೯೪). ವಚನಕಾರ್ತಿಯವರು: ಒಂದು ವಿಮುಕ್ತಿಪರ ಚಿಂತನ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಕನ್ನಡ ಸಂಘ. ಬೆಂಗಳೂರು.
ಸುಂಕಾಪುರ ಎಂ. ಎಸ್. (೧೯೭೭). ಜೋಗತಿ ಹಾಡುಗಳು. ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಶ್ರೀಮತಿ ಎಚ್. ಎಸ್. (೧೯೯೪). ಚಹರೆ. ಇಳಾ ಪ್ರಕಾಶನ. ಬೆಂಗಳೂರು.