ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಸ್ಯಸಂಕುಲ
Main Article Content
Abstract
ಮಾನವನ ಬದುಕು ಮತ್ತು ಸಂಸ್ಕೃತಿಗಳು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಅದರಲ್ಲೂ ಬುಡಕಟ್ಟು ಸಮುದಾಯಗಳು ಪ್ರಕೃತಿಯ ಮಡಿಲಲ್ಲಿಯೇ ಬದುಕುವುದರಿಂದ ಅವರ ಸಾಹಿತ್ಯ ಮತ್ತು ಆಚರಣೆಗಳಲ್ಲಿ ಸಸ್ಯಸಂಕುಲಕ್ಕೆ ವಿಶೇಷ ಸ್ಥಾನವಿದೆ. ಬುಡಕಟ್ಟು ಜನರ ಗೀತೆ, ಗಾದೆ, ಒಗಟು ಮತ್ತು ಬೈಗುಳಗಳಲ್ಲಿ ಸಸ್ಯಗಳ ಪ್ರಸ್ತಾಪ ಮತ್ತು ಮಹತ್ವವನ್ನು ಈ ಬರಹ ಚರ್ಚಿಸುತ್ತದೆ. ಮುತ್ತುಗ, ಕೆಂದೆ, ರುದ್ರಾಕ್ಷಿ ಮತ್ತು ಬಿದಿರಿನಂತಹ ಮರಗಳನ್ನು ಅವರು ದೈವಿಕ ಮತ್ತು ಲೌಕಿಕ ದೃಷ್ಟಿಕೋನಗಳಿಂದ ಹೇಗೆ ಕಾಣುತ್ತಾರೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಬುಡಕಟ್ಟು ಜನರ ವೈದ್ಯ ಪದ್ಧತಿ, ಆಹಾರ ಪದ್ಧತಿ ಮತ್ತು ನಂಬಿಕೆಗಳಲ್ಲಿ ಗಿಡಮರಗಳ ಪಾತ್ರವನ್ನು ಕ್ಷೇತ್ರಕಾರ್ಯದ ಆಧಾರದ ಮೇಲೆ ಇಲ್ಲಿ ನಿರೂಪಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಮಹೇಶ್ ಆರ್, ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜಾನಪದ, ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, 2018.
ಮಾಗಡಿ ಆರ್. ಗುರುದೇವ, ಕರ್ನಾಟಕದ ಔಷಧೀಯ ಸಸ್ಯಗಳು (ಮಾಲಿಕೆ-3), ದಿವ್ಯಚಂದ್ರಪ್ರಕಾಶನ, ಬೆಂಗಳೂರು, 2014.
ವೀರಣ್ಣ ಎಂ. ಡಿ. ಗಿರಿಜನರ ವೈದ್ಯ ಪದ್ಧತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2016.
ಶ್ರೀಪಾದ ಭಟ್, ಕರಾವಳಿಯ ಸಿರಿಯೊಡಲು, ಜೆ.ಎಸ್.ಎಸ್. ಪ್ರಿಟಿಂಗ್ ಪ್ರೆಸ್, ಮೈಸೂರು, 2002.