ಸರ್ವಕಾಲಕ್ಕೂ ಸಲ್ಲುವ ದಮನಿತರ ಮೂಕನಾಯಕ 'ಏಕಲವ್ಯ'

Main Article Content

ಆರ್. ಪಿ. ಮಂಜುನಾಥ್
ನಾಗೇಶ್ ವಿ. ಬೆಟ್ಟಕೋಟೆ

Abstract

ದಲಿತ ಕವಿ ಡಾ. ಸಿದ್ಧಲಿಂಗಯ್ಯನವರ 'ಏಕಲವ್ಯ' ನಾಟಕವು ಪುರಾಣದ ದಮನಿತ ಪಾತ್ರವೊಂದನ್ನು ಹೊಸ ದೃಷ್ಟಿಕೋನದಲ್ಲಿ ಕಟ್ಟಿಕೊಡುತ್ತದೆ. ಮಹಾಭಾರತದ ಏಕಲವ್ಯನ ಕಥೆಯನ್ನು ಆಧಾರವಾಗಿಟ್ಟುಕೊಂಡು, ಶೋಷಿತ ಸಮುದಾಯದ ನೋವು, ಅವಮಾನ ಮತ್ತು ಪ್ರತಿಭಟನೆಯನ್ನು ಈ ಕೃತಿ ಅನಾವರಣಗೊಳಿಸುತ್ತದೆ. ದ್ರೋಣ ಮತ್ತು ಏಕಲವ್ಯರ ನಡುವಿನ ಗುರು-ಶಿಷ್ಯ ಸಂಬಂಧವನ್ನು ಪ್ರಶ್ನಿಸುತ್ತಾ, ವಿದ್ಯೆಯ ಮೇಲಿನ ಏಕಸ್ವಾಮ್ಯ ಮತ್ತು ಜಾತಿ ತಾರತಮ್ಯವನ್ನು ನಾಟಕಕಾರರು ತೀವ್ರವಾಗಿ ಟೀಕಿಸಿದ್ದಾರೆ. ಇಲ್ಲಿ ಏಕಲವ್ಯನು ಕೇವಲ ಒಬ್ಬ ಪೌರಾಣಿಕ ಪಾತ್ರವಾಗಿರದೆ, ಇಂದಿನ ಶೋಷಿತವರ್ಗದ ಧ್ವನಿಯಾಗಿ ಮೂಡಿಬಂದಿದ್ದಾನೆ. ಅಸಹಾಯಕತೆಯಿಂದ ಸಿಡಿದೇಳುವ ಏಕಲವ್ಯ, ಮಾನವೀಯತೆಯಿಲ್ಲದ ಧರ್ಮ ಮತ್ತು ಕುಲಧರ್ಮದ ಪರಿಕಲ್ಪನೆಗಳನ್ನು ಧಿಕ್ಕರಿಸುವ ಮೂಲಕ ಸಮಾನತೆಯ ಆಶಯವನ್ನು ಬಿತ್ತುತ್ತಾನೆ. ರಂಗಭೂಮಿಯ ತಂತ್ರಗಳನ್ನು ಬಳಸಿ ರಚಿತವಾದ ಈ ನಾಟಕವು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ದಮನಿತರ ಪರವಾದ ಗಟ್ಟಿಯಾದ ನಿಲುವನ್ನು ಪ್ರದರ್ಶಿಸುತ್ತದೆ.

Article Details

Section

Research Articles

Author Biographies

ಆರ್. ಪಿ. ಮಂಜುನಾಥ್

ರಂಗ ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂ.ವಿ.ವಿ.

ನಾಗೇಶ್ ವಿ. ಬೆಟ್ಟಕೋಟೆ

ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಏಕಲವ್ಯ (ನಾಟಕ)-ಡಾ.ಸಿದ್ಧಲಿಂಗಯ್ಯ, ಅಂಕಿತ ಪ್ರಕಾಶನ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು. ಪ್ರಕಟಣಾ ವರ್ಷ-2020 (5ನೇ ಮುದ್ರಣ)

ನನ್ನ ಜನಗಳು (ಕವನ ಸಂಕಲನ)-ಡಾ. ಸಿದ್ಧಲಿಂಗಯ್ಯ,ವಿಶ್ವ ಕನ್ನಡ ಸಾಹಿತ್ಯ ಮಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಬೆಂಗಳೂರು. ಪ್ರಕಟಣಾ ವರ್ಷ-2010

ಸಿದ್ಧಲಿಂಗಯ್ಯ-ಕನ್ನಡ ಸಾಹಿತ್ಯ ಪರಿಷತ್ತು ಬ್ಲಾಗ್.