ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪಾಶ್ಚಾತ್ಯ ಮತ್ತು ದೇಸಿ ರಂಗ ತಂತ್ರಗಳ ಒಂದು ವಿವೇಚನೆ
Main Article Content
Abstract
ಗಿರೀಶ್ ಕಾರ್ನಾಡರ ‘ಹಯವದನ’ ನಾಟಕವು ರಂಗಭೂಮಿಯಲ್ಲಿ ಪಾಶ್ಚಾತ್ಯ ಮತ್ತು ದೇಸಿ ರಂಗತಂತ್ರಗಳ ಅಪೂರ್ವ ಸಂಗಮವಾಗಿದೆ. ಯಕ್ಷಗಾನದ ಭಾಗವತ ಪರಂಪರೆ, ಗೊಂಬೆಗಳ ಸಂಭಾಷಣೆ ಮತ್ತು ಜನಪದ ಕಥಾನಕಗಳನ್ನು ಬಳಸಿಕೊಳ್ಳುವ ಮೂಲಕ ದೇಸಿ ಸೊಗಡನ್ನು ಉಳಿಸಿಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಜರ್ಮನಿಯ ಬ್ರೆಕ್ಟ್ನ ಎಪಿಕ್ ರಂಗಭೂಮಿಯ ತಂತ್ರಗಳಾದ ದೂರೀಕರಣ, ಮುಖವಾಡಗಳ ಬಳಕೆ ಮತ್ತು ಮೇಳಗಳ ಸಂಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಮಾನವನ ಅಪೂರ್ಣತೆ ಮತ್ತು ಪೂರ್ಣತೆಯ ಹಂಬಲವನ್ನು ಧ್ವನಿಸುವ ಈ ನಾಟಕವು, ರಂಗತಂತ್ರಗಳ ದೃಷ್ಟಿಯಿಂದ ಪ್ರಯೋಗಶೀಲ ಕೃತಿಯಾಗಿದೆ. ದೇಸಿ ಮತ್ತು ವಿದೇಶಿ ಶೈಲಿಗಳೆರಡನ್ನೂ ಸಮತೂಕದಲ್ಲಿ ಬೆರೆಸಿ, ನಾಟಕವನ್ನು ಸಮಾಜಮುಖಿಯನ್ನಾಗಿಸುವಲ್ಲಿ ಕಾರ್ನಾಡರ ಕಸುಬುದಾರಿಕೆಯನ್ನು ಇಲ್ಲಿ ವಿವರಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಹಯವದನ: ಗಿರೀಶ್ ಕಾರ್ನಾಡ್
ಒಡನಾಟ: ಡಾ. ಕೆ. ಮರುಳ ಸಿದ್ದಪ್ಪ
ಆಧುನಿಕ ಕನ್ನಡ ನಾಟಕ : ಡಾ. ಕೆ. ಮರುಳ ಸಿದ್ದಪ್ಪ
ಗಿರೀಶ್ ಕಾರ್ನಾಡ್ ಮತ್ತು ಭಾರತೀಯ ರಂಗಭೂಮಿ: ಡಾ. ಜಿ. ಎಸ್. ಅಮೂರ
ಗಿರೀಶ್ ಕಾರ್ನಾಡರ ನಾಟಕ ಪ್ರಪಂಚ: ಮಾಧವ ಕುಲಕರ್ಣಿ
ನಾಟಕ ಸಾಹಿತ್ಯ ಮತ್ತು ರಂಗಭೂಮಿ: ಡಾ.ಗಿರಡ್ಡಿ ಗೋವಿಂದರಾಜ
ಸನ್ನಿವೇಶ: ಡಾ. ಯು. ಆರ್. ಅನಂತಮೂರ್ತಿ
ಅಸಂಗತ: ಬಸವರಾಜ ನಾಯ್ಕರ್.