ಧಾರ್ಮಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಸಾಂಗತ್ಯ ಕಾವ್ಯ
Main Article Content
Abstract
ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಸಾಂಗತ್ಯವು ತನ್ನ ಸರಳತೆ ಮತ್ತು ಗೇಯತೆಯಿಂದಾಗಿ ಹದಿನೈದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಅತ್ಯಂತ ಜನಪ್ರಿಯವಾಯಿತು. ಜೈನ, ವೀರಶೈವ ಮತ್ತು ಬ್ರಾಹ್ಮಣ ಕವಿಗಳು ತಮ್ಮ ಧರ್ಮದ ತತ್ವಗಳು ಹಾಗೂ ಮಹಾಪುರುಷರ ಚರಿತ್ರೆಗಳನ್ನು ನಿರೂಪಿಸಲು ಈ ಪ್ರಕಾರವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸ್ಥಳೀಯ ಛಂದಸ್ಸಾದ ಸಾಂಗತ್ಯವು ರಾಜಾಶ್ರಯ ಮತ್ತು ಜನಪ್ರಿಯತೆ ಎರಡನ್ನೂ ಪಡೆಯಿತು. ವಿವಿಧ ಧರ್ಮಗಳ ಹಿನ್ನೆಲೆಯಲ್ಲಿ ಸಾಂಗತ್ಯ ಕೃತಿಗಳ ರಚನೆ, ಬೆಳವಣಿಗೆ ಮತ್ತು ಸಾಹಿತ್ಯಕ ಮೌಲ್ಯಗಳನ್ನು ಹಾಗೂ ಕವಿಗಳು ಅಳವಡಿಸಿಕೊಂಡ ವಸ್ತು ವೈವಿಧ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡಾ. ಡಿ. ಎಸ್. ಕರ್ಕಿ- ಕನ್ನಡ ಛಂದೋವಿಕಾಸ, 1977.
ರಂ. ಶ್ರೀ ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ, 1984.
ಎ. ವೆಂಕಟಸುಬ್ಬಯ್ಯ- ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ- 1927.
ಟಿ.ವಿ.ವೆಂಕಟಾಚಲ ಶಾಸ್ತ್ರಿ- ಕನ್ನಡ ಛಂದಸ್ಸು- ಪುಟ 88-89, 1976.