ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ಕಟ್ಟುವಲ್ಲಿ ಅಂಕಣ ಸಾಹಿತ್ಯ

Main Article Content

ಬೋವಿ ಹೊನ್ನಪ್ಪ

Abstract

ಪತ್ರಿಕೋದ್ಯಮದ ಪ್ರಮುಖ ಭಾಗವಾದ ಅಂಕಣ ಸಾಹಿತ್ಯವು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 'ಮಂಗಳೂರು ಸಮಾಚಾರ' ಪತ್ರಿಕೆಯಿಂದ ಪ್ರಾರಂಭವಾದ ಈ ಪ್ರಕಾರವು, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಬಲ ಮಾಧ್ಯಮವಾಗಿ ಬೆಳೆದಿದೆ. ಹಾ.ಮಾ. ನಾಯಕ, ಪಾಟೀಲ ಪುಟ್ಟಪ್ಪ, ಪಿ. ಲಂಕೇಶ್‌, ಬೀಚಿ ಮುಂತಾದ ದಿಗ್ಗಜ ಅಂಕಣಕಾರರು ತಮ್ಮ ಲೇಖನಗಳ ಮೂಲಕ ಕನ್ನಡಿಗರ ಅರಿವಿನ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ಭಾಷಾಭಿಮಾನ, ವಿಮರ್ಶಾತ್ಮಕ ದೃಷ್ಟಿಕೋನ ಮತ್ತು ಜನಪರ ಕಾಳಜಿಯನ್ನು ಮೂಡಿಸುವಲ್ಲಿ ಅಂಕಣಗಳು ನಿರ್ವಹಿಸಿದ ಜವಾಬ್ದಾರಿಯನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ವರ್ತಮಾನದ ತಲ್ಲಣಗಳಿಗೆ ಕನ್ನಡಿ ಹಿಡಿಯುತ್ತಲೇ ಭವಿಷ್ಯದ ಕನ್ನಡ ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅಂಕಣ ಸಾಹಿತ್ಯದ ಕೊಡುಗೆ ಮತ್ತು ಬೆಳವಣಿಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಬೋವಿ ಹೊನ್ನಪ್ಪ

ಸಹಾಯಕ ಪ್ರಾಧ್ಯಾಪಕರು, ಎಸ್.ಕೆ.ಎ.ಸಿ.ಕಾಲೇಜು, ಹಾನಗಲ್ಲ.

References

ಅಂಕಣ ಸಾಹಿತ್ಯದ ಅಂದ ಹೆಚ್ಚಿಸಿದ ಎಂ.ಬಿ. ಕುಕ್ಯಾನ್, ಜಿ.ಎನ್. ಉಪಾಧ್ಯ, ಕನ್ನಡ ವಿಭಾಗ, ಮುಂಬಯಿ, 2012.

ಸಂಪ್ರತಿ, ಹಾ .ಮಾ. ನಾಯಕ, ಹೇಮಂತ ಸಾಹಿತ್ಯ ಪ್ರಕಾಶನ, ಚಿಕ್ಕಮಗಳೂರು, 2007.

ಕನ್ನಡ ಸಾಹಿತ್ಯ ಪತ್ರಿಕೆಗಳು ಇತಿಹಾಸ-ವರ್ತಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1993.

ಚಹಾದ ಜೋಡಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಅನನ್ಯ ಪ್ರಕಾಶನ, ಧಾರವಾಡ, 1996.

ಅಂಕಣತೋಟ, ವಾಗೀಶ ಬ. ಹೂಗಾರ (ಸಂ.), ಮಲೆನಾಡು ಪ್ರಕಾಶನ, ಚಿಕ್ಕಮಗಳೂರು, 2020.

ಸಾಹಿತ್ಯ ಪ್ರಕಾರಗಳು, ಪಿ.ವಿ.ಶಾಸ್ತಿ, ಪ್ರತಿಭಾ ಗ್ರಂಥಮಾಲೆ, ಧಾರವಾಡ, 2011.

ಪ್ರಬಂಧ ಪ್ರಪಂಚ, ಎಚ್.ವಿ ನಾಗೇಶ, ಡಾ.ರಾ.ಯ. ಧಾರವಾಡಕರ ಸನ್ಮಾನ ಸಮಿತಿ, ಧಾರವಾಡ,1990.

ಕನ್ನಡ ಸಾಹಿತ್ಯ ವಿಮರ್ಶೆಯ ತಾತ್ವಿಕ ವಿವೇಚನೆ, ಡಾ.ರಂ.ಶ್ರೀ.ಮುಗಳಿ, 1957.

ಕನ್ನಡದಲ್ಲಿ ಅಂಕಣ ಸಾಹಿತ್ಯ, ಡಾ. ದೊಡ್ಡಗೌಡ. ಬಿ. ಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2021.

ಇಗೋ ಕನ್ನಡ ಸಾಮಾಜಿಕ ನಿಘಂಟು, ಜಿ.ವೆಂಕಟಸುಬ್ಬಯ್ಯ, ನವಕರ್ನಾಟಕ ಪ್ರಕಾಶನ, ಬೆಂಗಳೂರು, 1997.