ಸಾಂಸ್ಕೃತಿಕ ಹಿನ್ನಲೆಯಲ್ಲಿ ದೇವಿ ಶಿಲ್ಪಗಳ ಪರಿಕಲ್ಪನೆ
Keywords:
ಮಂಡಮೇಮು, ಅರ್ಜುನಪುರಿ, ಡಿಂಬಾಕಾಸುರ, ಪ್ರಭಾವಳಿ, ಹರಕೆ, ಪ್ರತಿಮಾಶಾಸ್ತ್ರAbstract
ಮಂಡ್ಯ ಜಿಲ್ಲೆಯ ಎಂಬುದು ಕರ್ನಾಟಕ ರಾಜ್ಯದಲ್ಲಿ ಕಂಡುಬರುವ ಒಂದು ಪ್ರಸಿದ್ಧ ಜಿಲ್ಲೆ ಹಾಗೂ ಪ್ರವಾಸಿ ತಾಣ ಕೇಂದ್ರವಾಗಿದ್ದು, ಇದು ಮೈಸೂರಿನಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿ ಕಂಡುಬರುತ್ತದೆ. ಈ ಜಿಲ್ಲೆಯನ್ನು ಪ್ರಮುಖವಾಗಿ 7 ತಾಲೂಕುಗಳನ್ನು 11 ಪಟ್ಟಣ 31 ಹೋಬಳಿ 232 ಮಂಡಲ ಪಂಚಾಯಿತಿ ಹಾಗೂ 1370 ಗ್ರಾಮಗಳನ್ನು ಒಳಗೊಂಡಿದೆ. ಈ ಜಿಲ್ಲೆಯು 01-07-1939ರಲ್ಲಿ ಮೈಸೂರು ಪ್ರಾಂತ್ಯದಿಂದ ಬೇರ್ಪಟ್ಟು ಒಂದು ಸ್ವತಂತ್ರ ಜಿಲ್ಲೆಯಾಗಿ ರಚನೆಗೊಂಡಿತು. ಸಮುದ್ರ ಮಟ್ಟದಿಂದ ಸುಮಾರು 760 ರಿಂದ 920 ಮೀಟರ್ ಅಂತರದಲ್ಲಿ ಕೇಂದ್ರೀಕೃತಗೊಂಡಿದೆ.
ದ್ವಾಪರಯುಗದಲ್ಲಿ ಮಂಡಮೇಮು ಎಂಬ ಋಷಿಯು ಇಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಮತ್ತು ಮಾಂಡವ್ಯ ಎಂಬ ಋಷಿಯು ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದು ಇಲ್ಲಿ ಅರಣ್ಯ ಪ್ರಾಣಿಗಳಿಗೆ ವೇದವನ್ನು ಉಪದೇಶಿಸಿದ ಕಾರಣ ಇದಕ್ಕೆ ವೇದಾರಣ್ಯ ಅಥವಾ ವೇದಾಪುರ ಎಂತಲೂ, ಮತ್ತೊಂದು ಐತಿಹ್ಯದ ಪ್ರಕಾರ ಸಕಲೇಶ್ವರ ಸ್ವಾಮಿಯ ಈ ಪ್ರದೇಶದಲ್ಲಿ ವಿಷ್ಣು ದೇವಾಲಯವನ್ನು ನಿರ್ಮಿಸಿದ ಕಾರಣ ಸ್ಥಳಕ್ಕೆ ವಿಷ್ಣುಪುರ ಎಂತಲೂ ಸಹ ಕರೆಯಲಾಗಿದೆ. ಇಲ್ಲಿ 20ನೇ ಶತಮಾನದವರೆಗೂ ಒಣ ಭೂಮಿಯಾಗಿದ್ದು ಕೆ.ಆರ್.ಎಸ್. ಅಣೆಕಟ್ಟೆಯ ನಿರ್ಮಾಣದಿಂದಾಗಿ ಈ ಜಿಲ್ಲೆಗೆ ಸುಮಾರು ಒಂದುವರೆ ಲಕ್ಷ ಎಕ್ಟೇರ್ ಭೂಮಿಯು ನೀರಾವರಿ ಸೌಲಭ್ಯವನ್ನು ಪಡೆದು ಆರ್ಥಿಕ ಪ್ರಗತಿಯತ್ತ ಸಾಗಿದೆ. ಇಲ್ಲಿ ಪ್ರಮುಖವಾಗಿ ಕಬ್ಬು ಮತ್ತು ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಜಿಲ್ಲೆಗೆ ‘ಸಕ್ಕರೆ ನಗರ’ ಹಾಗೂ ‘ಭತ್ತದ ಕಣಜ’ ಎಂದು ಕರೆಯಲಾಗಿದೆ.
ಇಲ್ಲಿ ಪ್ರಧಾನವಾಗಿ 1902ರಲ್ಲಿ ಶಿವನಸಮುದ್ರದಲ್ಲಿ ಆರಂಭವಾದ ಜಲವಿದ್ಯುತ್ ಯೋಜನೆ ಏಷ್ಯಾದಲ್ಲಿ ಅತಿ ದೊಡ್ಡ ವಿದ್ಯುತ್ ಶಕ್ತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಒಟ್ಟು ವಿಸ್ತೀರ್ಣ 4961 ಚದರ ಕಿಲೋಮೀಟರ್ ಇದ್ದು 760-19 ಪೂರ್ವ ರೇಖಾಂಶದಿಂದ 770-07 ಪಶ್ಚಿಮ ರೇಖಾಂಶದವರೆಗೂ ಹಾಗೂ 120-11 ರಿಂದ 130-00 ಉತ್ತರ ಅಕ್ಷಾಂಶಗಳ ನಡುವೆ ವಿಸ್ತರಿಸಿದೆ. ಇಲ್ಲಿ ಪ್ರಮುಖವಾಗಿ ನಾಲ್ಕು ತಾಲೂಕುಗಳು ಮಾತ್ರ ರೈಲ್ವೆ ಮಾರ್ಗದಿಂದ ಸಂಪರ್ಕಿಸಲ್ಪಟ್ಟಿವೆ. (ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಪಾಂಡವಪುರ) ಇಲ್ಲಿ ವಿಶ್ವೇಶ್ವರಯ್ಯ ನಾಲೆ ಹಾಗೂ ಹೇಮಾವತಿ ಜಲಾಶಯದಿಂದ ಸದಾ ನೀರಿನ ಸೌಲಭ್ಯದಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಇಂದಿಗೂ ಈ ಜಿಲ್ಲೆಯು ಲೋಕಸಭಾ ಚುನಾವಣೆಯಲ್ಲಿ ಇಡೀ ಭಾರತವೇ ಆಕರ್ಷಿಸುವಂತಹ ಫಲಿತಾಂಶವನ್ನು ನೀಡುತ್ತಲೇ ಬಂದಿದೆ.
References
Hayavadana Rao C, Mysore Gazetter -02.
Pro.Shalvapille Iyanger, (2019), Iconography of Vishnu in Hoysala Temples, Manasa Gangothri, Mysore.
Dr.Swamy LN, (1996), History of SriRangapatna, Harman Publishing House, Mysore.
Heraas Herry, (1927), The Aravidu Dynasty of Vijayanagara, Madras.
Krishnaswamy Iyengar KS, (1960), Mysore Under The Wodeyar’s, Madras.
Huks T, (1932), Life of Sir David Beard, volume-02, London.
Achutha Rao DS, (1956), Early Wodeyars of Mysore and They are Cultural Tradition in quarterly Journals. Methic society, Bangalore.
Raviprasad S, (2017), Srirangapatnada Ithihasika mattu Samskrithika Ithihasa-Ondhu Adyana, Mysore.
Diwakar R, (2006), Karnataka Samskruthika Parampare, Kannada Mattu Sanskrithi Ilake, Bangalore.
Gopinath Rao TN, (1914), A Elements of Hindu Iconography, volume 1 and 2, The law printing house, Madras.
Dr.Gopal R, (2008), Mandya Jilleya Ithihasa Mattu Purathatva, Directorate of Archaeology and Museum, Mysore palace complex, Mysore.
Rama Ramakrishna KR & Gayatri Devi JV, (2016), Heritage series of Srirangapatna, Department of Archaeology Museum and Heritage, Bangalore.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.