ತೇಜಸ್ವಿ ಮಾಯಲೋಕ ಕಾದಂಬರಿಯಲ್ಲಿನ ಮನುಷ್ಯ ಸಮಾಜ ಹಾಗೂ ಪರಿಸರದ ಅವಿನಾಭಾವ ಸಂಬಂಧಗಳು
Main Article Content
Abstract
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಲೋಕ’ ಕಾದಂಬರಿಯು ಗ್ರಾಮೀಣ ಭಾರತದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕಲ್ಲೋಲಗಳನ್ನು ಪರಿಸರದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಗೊಂದಲಗೇರಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿನ ದೈನಂದಿನ ಬದುಕಿನ ಸಂಕೀರ್ಣತೆಗಳು, ಜಾತಿ, ವೃತ್ತಿ ಹಾಗೂ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನು ಇಲ್ಲಿ ಚರ್ಚಿಸಲಾಗಿದೆ. ಸತತ ಮೂರು ವರ್ಷಗಳ ಬರಗಾಲವು ಸೃಷ್ಟಿಸುವ ಆಡಳಿತಾತ್ಮಕ ಅರಾಜಕತೆ, ರೈತ ಚಳವಳಿ ಮತ್ತು ಇಲಾಖೆಗಳ ನಡುವಿನ ಸಂಘರ್ಷಗಳು ಮಾನವನ ಅಸಹಾಯಕತೆಯನ್ನು ತೋರುತ್ತವೆ. ಮನುಷ್ಯನ ಅಹಂಕಾರದ ಮೇಲಾಟಗಳು ಪ್ರಕೃತಿಯ ಅನಂತ ಶಕ್ತಿಯೆದುರು ಹೇಗೆ ಅರ್ಥಹೀನವಾಗುತ್ತವೆ ಎಂಬುದನ್ನು ಈ ಅಧ್ಯಯನವು ಪ್ರತಿಪಾದಿಸುತ್ತದೆ. ಮಹಾಮಳೆಯ ಆಗಮನದೊಂದಿಗೆ ಮಾನವ ನಿರ್ಮಿತ ‘ಗೊಂದಲ’ಗಳು ಕೊಚ್ಚಿಹೋಗಿ, ಪರಿಸರವೇ ಅಂತಿಮ ನಿರ್ಧಾರಕ ಶಕ್ತಿ ಎಂಬ ಆಶಯವನ್ನು ಕಾದಂಬರಿಯ ಮೂಲಕ ಇಲ್ಲಿ ಗುರುತಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಅಶೋಕ ಟಿ.ಪಿ., (2004), ತೇಜಸ್ವಿ ಕಥನ, ಹೆಗ್ಗೋಡು: ಅಕ್ಷರ ಪ್ರಕಾಶನ.
ಅಶೋಕ ಟಿ.ಪಿ., (2013), ಕಥನ ಪ್ರೀತಿ, ಹೆಗ್ಗೋಡು: ಅಕ್ಷರ ಪ್ರಕಾಶನ.
ನಾಗಭೂಷಣ್ ಡಿ.ಎಸ್., (2010), ರಾಮಮನೋಹರ ಲೋಹಿಯಾ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.
ರಹಮತ್ ತರೀಕೆರೆ, (1993), ಪ್ರತಿಸಂಸ್ಕೃತಿ, ಬಳ್ಳಾರಿ: ಲೋಹಿಯಾ ಪ್ರಕಾಶನ.
ವೀರಪ್ಪ ಜಿ.ಟಿ., (2004), ತೇಜಸ್ವಿ ಸಾಹಿತ್ಯ ಕೃಷಿ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಪೂರ್ಣಚಂದ್ರ ತೇಜಸ್ವಿ ಕೆ.ಪಿ., (2012), ಹೊಸ ವಿಚಾರಗಳು, ಮೈಸೂರು: ಪುಸ್ತಕ ಪ್ರಕಾಶನ.
ಆಮೂರ ಜಿ.ಎಸ್., (2003), ಕನ್ನಡ ಕಥನ ಸಾಹಿತ್ಯ: ಸಣ್ಣಕಥೆಗಳು, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.