ಶಿವಶರಣೆಯರ ಸ್ತ್ರೀ ಸಂವೇದಿ ನೆಲೆಗಳು
Main Article Content
Abstract
12ನೇ ಶತಮಾನದ ವಚನ ಚಳುವಳಿಯು ಸಾಮಾಜಿಕ ಕ್ರಾಂತಿಯ ಜೊತೆಗೆ ಸ್ತ್ರೀ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿತು. ಅನುಭವ ಮಂಟಪದ ಪ್ರಭಾವದಿಂದ ಮಹಿಳೆಯರು ಕೌಟುಂಬಿಕ ಚೌಕಟ್ಟನ್ನು ಮೀರಿ ಆಧ್ಯಾತ್ಮಿಕ ಮತ್ತು ಬೌದ್ಧಿಕ ಎತ್ತರಕ್ಕೇರಿದರು. ಬಸವಣ್ಣನವರ ಧರ್ಮಪತ್ನಿ ನೀಲಮ್ಮನ ತಾತ್ವಿಕ ನಿಲುವು, ಮುಕ್ತಾಯಕ್ಕನ ವೈಚಾರಿಕ ಪ್ರಜ್ಞೆ ಮತ್ತು ಅಕ್ಕಮ್ಮನ ಕಾಯಕ ನಿಷ್ಠೆಗಳು ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ವಿಶಿಷ್ಟ ನೆಲೆಗಳನ್ನು ಅನಾವರಣಗೊಳಿಸುತ್ತವೆ. ಮೂಢನಂಬಿಕೆಗಳ ನಿವಾರಣೆ, ನಡೆ-ನುಡಿಗಳ ಶುದ್ಧತೆ ಮತ್ತು ಕಾಯಕದ ಮಹತ್ವವನ್ನು ಸಾರುವಲ್ಲಿ ಈ ಶರಣೆಯರ ಪಾತ್ರ ಹಿರಿದು. ಪಿತೃಪ್ರಧಾನ ವ್ಯವಸ್ಥೆಯ ನಡುವೆಯೂ ಮಹಿಳೆಯರು ತಮ್ಮ ಸ್ವಂತಿಕೆ ಹಾಗೂ ಅಸ್ಮಿತೆಯನ್ನು ರೂಪಿಸಿಕೊಂಡ ಬಗೆ ಮತ್ತು ಅವರ ಸಾಹಿತ್ಯಿಕ ಕೊಡುಗೆಯ ಮಹತ್ವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಬಸವ ಸಮಿತಿ (ಸಂ), (2017), ಬಸವೇಶ್ವರ ಸಮಕಾಲೀನರು, ಬೆಂಗಳೂರು: ಬಸವ ಸಮಿತಿ.
ಬಸವರಾಜ ಸಬರದ, (2010), ವಚನ ಚಳುವಳಿ, ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.
ರಾಜಶೇಖರ ಜಮದಂಡಿ, (2009), ವಚನ ಸಾಹಿತ್ಯದಲ್ಲಿ ಪ್ರತಿಭಟನೆ, ಮೈಸೂರು: ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು.