ಹರಿದಾಸ ಸಾಹಿತ್ಯಕ್ಕೆ ಮಾಧ್ವ ಯತಿಗಳ ಕೊಡುಗೆ

Main Article Content

ಶ್ರೀನಿವಾಸ ಫಡ್ನೀಸ್

Abstract

ಹರಿದಾಸ ಸಾಹಿತ್ಯ ಪರಂಪರೆಯು ಮಾಧ್ವ ಯತಿಗಳ ಕೊಡುಗೆಯಿಂದಾಗಿ ಅತ್ಯಂತ ಶ್ರೀಮಂತಗೊಂಡಿದೆ. ದ್ವೈತ ಸಿದ್ಧಾಂತದ ಕ್ಲಿಷ್ಟಕರ ತತ್ವಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಪ್ರಚುರಪಡಿಸುವುದು ಈ ಯತಿಗಳ ಪ್ರಮುಖ ಉದ್ದೇಶವಾಗಿತ್ತು. ಹರಿದಾಸ ಪಂಥದ ಮೂಲಪುರುಷರಾದ ನರಹರಿತೀರ್ಥರು, ಪಿತಾಮಹರೆನಿಸಿದ ಶ್ರೀಪಾದರಾಜರು, ದಾಸಕೂಟವನ್ನು ಸಾಂಸ್ಥೀಕರಿಸಿದ ವ್ಯಾಸತೀರ್ಥರು, ವಾದಿರಾಜರು ಹಾಗೂ ವ್ಯಾಸತತ್ವಜ್ಞತೀರ್ಥರಂತಹ ಮಹಾನ್ ಯತಿಗಳು ಕೀರ್ತನೆ, ಸುಳಾದಿ ಮತ್ತು ಉಗಾಭೋಗಗಳ ಮೂಲಕ ಭಕ್ತಿಮಾರ್ಗವನ್ನು ತೋರಿಸಿಕೊಟ್ಟರು. ಸಂಸ್ಕೃತದಲ್ಲಿದ್ದ ವೇದ-ಉಪನಿಷತ್ತುಗಳ ಸಾರವನ್ನು ಸರಳ ಕನ್ನಡದಲ್ಲಿ ನೀಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಇವರು ಬೆಳೆಸಿದರು. ಹರಿಭಕ್ತಿ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿಯನ್ನು ಒಳಗೊಂಡ ಇವರ ಸಾಹಿತ್ಯವು ದಾಸಸಾಹಿತ್ಯದ ಬುನಾದಿಯಾಗಿದೆ. ಹರಿದಾಸ ಸಾಹಿತ್ಯದ ಉಗಮ ಮತ್ತು ವಿಕಾಸದಲ್ಲಿ ಈ ಪ್ರಮುಖ ಮಾಧ್ವ ಯತಿಗಳು ವಹಿಸಿದ ನಿರ್ಣಾಯಕ ಪಾತ್ರ ಹಾಗೂ ಅವರ ಸಾಹಿತ್ಯಿಕ ಕೊಡುಗೆಗಳ ವಿಶಿಷ್ಟತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಶ್ರೀನಿವಾಸ ಫಡ್ನೀಸ್

ಕನ್ನಡ ಹಾಗೂ ಸಂಸ್ಕೃತ ಉಪನ್ಯಾಸಕರು, ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ವಿದ್ಯಾಗಿರಿ, ಬಾಗಲಕೋಟೆ.

 

References

ವರದರಾವ್ ಜಿ., (1987), ಶ್ರೀಪಾದರಾಜರ ಕೃತಿಗಳು, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ.

ಅರಳುಮಲ್ಲಿಗೆ ಪಾರ್ಥಸಾರಥಿ, (2006), ವಾದಿರಾಜ ಸಂಪುಟ, ಬೆಂಗಳೂರು: ಅರಳುಮಲ್ಲಿಗೆ ಪ್ರಕಾಶನ (ಅಥವಾ ಹಂಸಧ್ವನಿ ಪ್ರಕಾಶನ).

ವಿದ್ವಾನ್ ಕೆ. ಹಯವದನ ಪುರಾಣಿಕರು, (2004), ಶ್ರೀ ಲಕ್ಷ್ಮೀಶೋಭನ ಪದ, ಬೆಂಗಳೂರು: ಶ್ರೀ ಆನಂದತೀರ್ಥ ಪ್ರತಿಷ್ಠಾನ.

ಶ್ರೀನಿವಾಸ ಮಠದ, (2008), ದಾಸ ಸಾಹಿತ್ಯ ಸೌರಭ, ವಿಜಯಪುರ: ಗೀತಾ ಪ್ರಕಾಶನ.

ಶ್ರೀ ಮನೋಹರ ಜೋಶಿ, (2010), ಹರಿದಾಸ ಸಾಹಿತ್ಯ ಬೆಳೆಸಿದ ನರಹರಿತೀರ್ಥರು, ಧಾರವಾಡ: ಸಮಾಜ ಪುಸ್ತಕಾಲಯ.