ತಲೆಮಾರಿನಿಂದ ತಲೆಮಾರಿಗೆ ಸಾಗಿದ 'ತೇರು'

Main Article Content

ಮಲ್ಲೇಶ ಸಿ.

Abstract

ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಯು ಊಳಿಗಮಾನ್ಯ ಪದ್ಧತಿಯಿಂದ ಪ್ರಜಾಪ್ರಭುತ್ವದವರೆಗಿನ ಸ್ಥಿತ್ಯಂತರಗಳನ್ನು ಮತ್ತು ಅಧಿಕಾರ ರಾಜಕಾರಣದ ಸ್ವರೂಪವನ್ನು ಅನಾವರಣಗೊಳಿಸುತ್ತದೆ. ದೇಸಗತಿಯ ವೈಭವ, ಧಾರ್ಮಿಕ ಆಚರಣೆಗಳು ಮತ್ತು ಅಧಿಕಾರಕ್ಕಾಗಿ ನಡೆಯುವ ಹಿಂಸೆಯನ್ನು ‘ತೇರು’ ಎಂಬ ಪ್ರಬಲ ರೂಪಕದ ಮೂಲಕ ಕಟ್ಟಿಕೊಡಲಾಗಿದೆ. ಕೆಳವರ್ಗದ ಜನರ ಶೋಷಣೆ, ರಕ್ತತಿಲಕದಂತಹ ಆಚರಣೆಗಳು ಮತ್ತು ಆಳುವ ವರ್ಗ ಸೃಷ್ಟಿಸುವ ಪುರಾಣಗಳು ಹೇಗೆ ಜನಸಾಮಾನ್ಯರನ್ನು ನಿಯಂತ್ರಿಸುತ್ತವೆ ಎಂಬುದನ್ನು ಕಾದಂಬರಿ ವಿಶ್ಲೇಷಿಸುತ್ತದೆ. ಗೊಂದಲಿಗರ ಗಾಯನದ ನಿರೂಪಣಾ ತಂತ್ರವನ್ನು ಬಳಸಿಕೊಂಡು, ತಲೆಮಾರುಗಳಿಂದ ನಡೆದು ಬಂದಿರುವ ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಮೌಢ್ಯಗಳನ್ನು ಲೇಖಕರು ಪ್ರಶ್ನಿಸಿದ್ದಾರೆ. ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದ ಕೇಂದ್ರಗಳು ಬದಲಾದರೂ, ಶೋಷಣೆಯ ಸ್ವರೂಪ ಒಂದೇ ಆಗಿರುತ್ತದೆ ಎಂಬ ಸೂಕ್ಷ್ಮತೆಯನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಮಲ್ಲೇಶ ಸಿ.

ಸಂಶೋಧನಾ ವಿದ್ಯಾರ್ಥಿ, ಮಹಾರಾಜ ಕಾಲೇಜು, ಮೈಸೂರು.

References

ರಾಘವೇಂದ್ರ ಪಾಟೀಲ, ತೇರು, ಮನೋಹರಾ ಗ್ರಂಥ ಮಾಲೆ, ಧಾರವಾಡ -001

ಜಿ ಎಸ್ ಆಮೂರ, ಕನ್ನಡ ಕಥನ ಸಾಹಿತ್ಯ : ಕಾದಂಬರಿ, ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-009(ಪ್ರಥಮ ಮುದ್ರಣ-1994)

ಸುರೇಶ ಹನಗಂಡಿ, ತೇರು ಕಾದಂಬರಿ ವಿವೇಚನೆ

ಭಾರ್ಗವಿ ಜಿ ಎಸ್ (ಸಂಶೋಧಕರು), ರಾಘವೇಂದ್ರ ಪಾಟೀಲರ ಸಮಗ್ರ ಸಾಹಿತ್ಯ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

http://suptadeepti.blogspot.com/2009/12/blog-post.html?m=1

http://raghavendrapatil.in/