ಕನ್ನಡ ಭಾಷೆಯ ಇಂದಿನ ಸ್ಥಿತಿ-ಗತಿ

Main Article Content

ಮಹೇಶ್ ಬಿ. ಡಿ.

Abstract

ಕಾವೇರಿಯಿಂದ ಗೋದಾವರಿಯ ತೀರದವರೆಗೆ ಹಬ್ಬಿದ ನಮ್ಮ ವಿಶಾಲವಾದ ಕನ್ನಡ ನಾಡು ವಸಾಹತುಶಾಹಿಯ ಆಡಳಿತ ಪರಿಣಾಮವಾಗಿ ಹರಿದು ಹಂಚಿಹೋಗಿತ್ತು. ಕನ್ನಡದ ಪ್ರಜ್ಞೆ ಮಾಯವಾಗಿದ್ದ ಕಾಲ ಘಟ್ಟದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ, ಆಲೂರು ವೆಂಕಟರಾಯರಂಥ ಮಹನೀಯರು ನಾಡು-ನುಡಿ ಪ್ರಜ್ಞೆಯನ್ನು ಮರು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿದರು. ಭಾರತದ ಸ್ವತಂತ್ರ್ಯ ಮತ್ತು ಕರ್ನಾಟಕದ ಏಕೀಕರಣ ಚಳವಳಿಗಳೆರಡೂ ಏಕಕಾಲದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ 1956ರ ನವೆಂಬರ್ 1ರಂದು ನಮ್ಮ ಚೆಲುವ ಕನ್ನಡನಾಡು ಉದಯವಾಗಿ ಕನ್ನಡಿಗರೆಲ್ಲರೂ ಸಂಭ್ರಮ ಪಡುವಂತಾಯಿತು. ಕನ್ನಡ ಭಾಷೆ ಅತ್ಯಂತ ಪ್ರಾಚೀನತೆ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ದಾಸರು ಮುಂತಾದ ಪ್ರಾಚೀನ ಕವಿಗಳು ಹಾಗೂ ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪ ನಂತಹ ಆಧುನಿಕ ಕವಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸಂವೃದ್ಧಗೊಳಿಸಿದ್ದಾರೆ. ಈ ರೀತಿಯ ಭವ್ಯ ಪರಂಪರೆಯುಳ್ಳ ಕರುನಾಡು ಅನೇಕ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕಾಲದಲ್ಲಿ ಕರ್ನಾಟಕದ ಏಕೀಕರಣದ ಕನಸು ಕಂಡವರು ಅನೇಕರು. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಉದಯವಾಗಲಿ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ಎಂದೆಲ್ಲ ನಾಡು ನುಡಿಯ ಶ್ರೇಷ್ಠತೆ ಮತ್ತು ಪಾವಿತ್ರತೆಯನ್ನು ನೀಡಿ ಹೋದರು ಇಂತ ಕನ್ನಡ ಮೂಲೆಗುಂಪಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

Article Details

Section

Research Articles

Author Biography

ಮಹೇಶ್ ಬಿ. ಡಿ.

ಸಂಶೋಧನಾ ವಿದ್ಯಾರ್ಥಿ, ಭಾರತೀ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ, ಭಾರತೀನಗರ, ಮದ್ದೂರು ತಾ, ಮಂಡ್ಯ ಜಿಲ್ಲೆ.

References

ರಂ.ಶ್ರೀ. ಮುಗುಳಿ, ಕನ್ನಡ ಸಾಹಿತ್ಯ ಚರಿತ್ರೆ (2011), ಗೀತಾ ಬುಕ್ ಹೌಸ್, ಮೈಸೂರು.

ತ.ಸು. ಶಾಮರಾಯ, ಕನ್ನಡ ಸಾಹಿತ್ಯ ಚರಿತ್ರೆ (2010), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಡಾ. ಪ್ರಧಾನ ಗುರುದತ್ತ, ಆಡಳಿತ ಭಾಷೆ: ಕೆಲವು ವಿಚಾರಗಳು (2014), ಡಿ. ವಿ. ಕೆ ಮೂರ್ತಿ ಪ್ರಕಾಶನ, ಮೈಸೂರು.

ರಾ.ಯ.ಧಾರವಾಡಕರ, ಕನ್ನಡ ಭಾಷಾಶಾಸ್ತ್ರ (2013), ಗೀತಾ ಬುಕ್ ಹೌಸ್, ಮೈಸೂರು.

ಎಲ್. ಎಸ್. ಕಾಡದೇವರ ಮಠ, ಕನ್ನಡ ಭಾಷಾ ಚರಿತ್ರೆ (2013), ಗೀತಾ ಬುಕ್ ಹೌಸ್, ಮೈಸೂರು.

ರಾಜೇಶ್ವರಿ ಮಹೇಶ್ವರಯ್ಯ, ಆಧುನಿಕ ವರ್ಣನಾತ್ಮಕ ಭಾಷವಿಜ್ಞಾನ (2015), ಸಮಾಜ ಪುಸ್ತಕಾಲಯ, ಧಾರವಾಡ.

ಪ್ರಜಾವಾಣಿ ಹಾಗೂ ವಿಜಯವಾಣಿ ಹಾಗೂ ಟಿ.ವಿ. ಮಾಧ್ಯಮಗಳ ವರದಿ ಸಂಗ್ರಹ.