ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು

Main Article Content

ಶಿವಾನಂದ ಜೋಗಿಯವರ

Abstract

ಕನ್ನಡ ಸಾಹಿತ್ಯ ಚರಿತ್ರೆಯುದ್ದಕ್ಕೂ ಮತ್ತು ಜಾಗತಿಕ ಮಟ್ಟದಲ್ಲಿ ಮಹಿಳಾ ಹಕ್ಕುಗಳು, ಸಮಾನತೆ ಹಾಗೂ ಸಬಲೀಕರಣದ ಪರವಾದ ದನಿಗಳು ನಿರಂತರವಾಗಿ ಮೊಳಗುತ್ತಿವೆ. 12ನೇ ಶತಮಾನದ ಅಕ್ಕಮಹಾದೇವಿಯವರ ವಚನ ಕ್ರಾಂತಿಯಿಂದ ಹಿಡಿದು ಆಧುನಿಕ ಬರಹಗಾರ್ತಿಯರಾದ ಎಂ.ಕೆ. ಇಂದಿರಾ, ತ್ರಿವೇಣಿಯವರ ಸಾಹಿತ್ಯದವರೆಗೆ, ಸ್ತ್ರೀ ಮೇಲಿನ ದೌರ್ಜನ್ಯ ಹಾಗೂ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧದ ಹೋರಾಟಗಳು ಹೇಗೆ ಅಭಿವ್ಯಕ್ತಿಗೊಂಡಿವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಇದರೊಟ್ಟಿಗೆ, ಪಾಶ್ಚಿಮಾತ್ಯ ಸ್ತ್ರೀವಾದದ ವಿವಿಧ ಅಲೆಗಳು ಮತ್ತು ಭಾರತೀಯ ಮಹಿಳಾ ಚಿಂತಕಿಯರ ವಿಚಾರಧಾರೆಗಳು ಜಾಗತಿಕ ಸ್ತ್ರೀ ಸಂವೇದನೆಗಳನ್ನು ವಿಸ್ತರಿಸಿದ ಬಗೆಯನ್ನು ವಿಶ್ಲೇಷಿಸಲಾಗಿದೆ. ಐತಿಹಾಸಿಕ ಮತ್ತು ಜಾಗತಿಕ ಸ್ತ್ರೀವಾದಿ ನೆಲೆಗಳನ್ನು ಗುರುತಿಸುವ ಜೊತೆಗೆ, ಆಧುನಿಕ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು ಸ್ವೇಚ್ಛಾಚಾರದತ್ತ ವಾಲುತ್ತಿರುವ ಬಗ್ಗೆ ವಿಮರ್ಶಾತ್ಮಕ ಕಾಳಜಿಯನ್ನು ವ್ಯಕ್ತಪಡಿಸಲಾಗಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು, ಮೌಲ್ಯಾಧಾರಿತ ಸಬಲೀಕರಣವನ್ನು ಸಾಧಿಸಬೇಕೆಂಬ ಆಶಯವನ್ನು ಇದು ಒಳಗೊಂಡಿದೆ.

Article Details

Section

Research Articles

Author Biography

ಶಿವಾನಂದ ಜೋಗಿಯವರ

ಮುಖ್ಯಸ್ಥರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ಸಿ.ಬಿ.ಎಸ್.ಇ. ಶಾಲೆ, ಗದಗ.

How to Cite

ಶಿವಾನಂದ ಜೋಗಿಯವರ. (2026). ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು. ಅಕ್ಷರಸೂರ್ಯ (AKSHARASURYA), 16(06), 132 to 136. https://aksharasurya.com/index.php/latest/article/view/2233

References

ಎಂ.ಕೆ. ಇಂದಿರಾ, (1976), ಫಣಿಯಮ್ಮ, ಬೆಂಗಳೂರು: ಸಾಹಿತ್ಯ ಭಂಡಾರ.

ತ್ರಿವೇಣಿ, (1956), ಬಿಡುಗಡೆ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.