ಕನ್ನಡ ಸಾಹಿತ್ಯದಲ್ಲಿ ಅಂಗವಿಕಲತೆ ಉಳ್ಳ ಸಮುದಾಯದ ಅನುಭೂತಿಯ ಶೋಧ
Main Article Content
Abstract
ಕನ್ನಡ ಸಾಹಿತ್ಯ ಚರಿತ್ರೆಯುದ್ದಕ್ಕೂ ಶೋಷಿತ ಮತ್ತು ದಮನಿತ ಸಮುದಾಯಗಳ ಧ್ವನಿಯಾಗಿ ಅನೇಕ ಚಳುವಳಿಗಳು ರೂಪುಗೊಂಡಿದ್ದರೂ, ಅಂಗವಿಕಲ ಸಮುದಾಯದ ಅನುಭೂತಿಗಳು ಮತ್ತು ಅಸ್ತಿತ್ವವನ್ನು ಸಮರ್ಪಕವಾಗಿ ದಾಖಲಿಸುವಲ್ಲಿ ಸಾಹಿತ್ಯ ವಲಯ ತೋರಿರುವ ಮೌನವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಪ್ರಾಚೀನ ವಚನ ಸಾಹಿತ್ಯದಿಂದ ಹಿಡಿದು ಆಧುನಿಕ ಕಾಲದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯದವರೆಗಿನ ಕೃತಿಗಳಲ್ಲಿ ವಿಕಲಚೇತನರನ್ನು ಪ್ರತಿನಿಧಿಸಿರುವ ಬಗೆಯನ್ನು ವಿಮರ್ಶಾತ್ಮಕವಾಗಿ ಪರಿಶೋಧಿಸಲಾಗಿದೆ. ಪ್ರಮುಖ ಲೇಖಕರ ಕೃತಿಗಳಲ್ಲಿ ಮೂಡಿಬಂದಿರುವ ಪಾತ್ರಗಳ ಉದಾಹರಣೆಗಳೊಂದಿಗೆ, ಸಮಾಜವು ಈ ಸಮುದಾಯವನ್ನು ನೋಡುವ ಪೂರ್ವಾಗ್ರಹ ಪೀಡಿತ ದೃಷ್ಟಿಕೋನಗಳನ್ನು ಚರ್ಚಿಸಲಾಗಿದೆ. ಅಂತಿಮವಾಗಿ, ಇತ್ತೀಚಿನ ದಿನಗಳಲ್ಲಿ ಬ್ರೈಲ್ ಲಿಪಿಯಲ್ಲಿನ ಸಾಹಿತ್ಯ ಪ್ರಕಟಣೆ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿನ ಪ್ರಾತಿನಿಧ್ಯದ ಮೂಲಕ ಈ ಸಮುದಾಯವು ತಮ್ಮದೇ ಆದ ಸೃಜನಾತ್ಮಕ ನೆಲೆ ಹಾಗೂ ಭರವಸೆಯನ್ನು ಕಂಡುಕೊಳ್ಳುತ್ತಿರುವ ಆಶಾದಾಯಕ ಬೆಳವಣಿಗೆಗಳನ್ನು ಎತ್ತಿ ತೋರಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.