ನಡೆ-ನುಡಿಯ ಆದರ್ಶ: ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ
Main Article Content
Abstract
ಪ್ರಸ್ತುತ ಸಂಶೋಧನಾ ಲೇಖನವು ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಜೀವನ, ಚಿಂತನೆ ಮತ್ತು “ನಡೆ–ನುಡಿ” ಆಧಾರಿತ ಮೌಲ್ಯತತ್ವಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಅಧ್ಯಯನವು ಅವರ ನ್ಯಾಯತತ್ತ್ವದಲ್ಲಿ ಮಾನವ ಘನತೆ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಅಂಶಗಳು ಹೇಗೆ ಸಮನ್ವಯಗೊಂಡಿವೆ ಎಂಬುದನ್ನು ವಿಶದಪಡಿಸುತ್ತದೆ. ಕೇವಲ ಕಾನೂನು ಪ್ರಕ್ರಿಯೆಗಳ ನಿರ್ವಹಣೆಗೆ ಸೀಮಿತವಾಗದೇ, ಮಾನವೀಯತೆ ಮತ್ತು ನ್ಯಾಯಸಮ್ಮತ ದೃಷ್ಟಿಕೋನವನ್ನು ಒಟ್ಟುಗೂಡಿಸಿದ ಅವರ ದಾರ್ಶನಿಕ ನಿಲುವು ಈ ಲೇಖನದ ಮುಖ್ಯ ಆವಿಷ್ಕಾರವಾಗಿದೆ. ಜೊತೆಗೆ, ಶರಣ ಸಂಸ್ಕೃತಿಯ ಪ್ರಭಾವದಲ್ಲಿ ರೂಪುಗೊಂಡ ಅವರ ವ್ಯಕ್ತಿತ್ವವು ಮೌಲ್ಯಾಧಾರಿತ ನಾಯಕತ್ವದ ಮಾದರಿಯಾಗಿ ಅಭಿವ್ಯಕ್ತವಾಗಿರುವುದನ್ನು ಲೇಖನವು ಸೂಚಿಸುತ್ತದೆ. ಈ ಅಧ್ಯಯನವು ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಜೀವನ ಮತ್ತು ಕಾರ್ಯಗಳನ್ನು ಸಮಕಾಲೀನ ಸಮಾಜದ ಸಾಂಸ್ಕೃತಿಕ ಹಾಗೂ ನೈತಿಕ ಪ್ರಸ್ತುತತೆಯ ಪರಿಪ್ರೇಕ್ಷ್ಯದಲ್ಲಿ ಅರ್ಥೈಸಿ, ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವ ಆದರ್ಶ ರೂಪವಾಗಿ ಸ್ಥಾಪಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಮರೇಶ ಯತಗಲ್ ಮತ್ತು ಡಾ. ಚನ್ನಬಸವ ಹಿರೇಮಠ (ಸಂ.), (2007), ಶರಣ ಪಥ (ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ಅಭಿನಂದನ ಗ್ರಂಥ).
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, (2024), ಕಳೆದ ಕಾಲ ನಡೆದ ದೂರ (ಆತ್ಮಕಥನ), ಬೆಂಗಳೂರು: ಸ್ಪರ್ಶ್ ಫೌಂಡೇಶನ್.
ಕಲ್ಯಾಣರಾವ ಜಿ. ಪಾಟೀಲ (ಸಂ.), (2026), ಗಂಧವ್ರತ: ಪ್ರಬುದ್ಧಪಥ, ರಾಯಚೂರು: ನ್ಯಾಯಮೂರ್ತಿ ಶಿವರಾಜ ಪಾಟೀಲ್ ಪ್ರತಿಷ್ಠಾನ.