ರಟ್ಟಮತಶಾಸ್ತ್ರದಲ್ಲಿ ಅಂತರ್ಜಲ (ಉದಕಾರ್ಗಳ) ವಿಚಾರ
Main Article Content
Abstract
ಪ್ರಾಚೀನ ಭಾರತದಲ್ಲಿ ಅಂತರ್ಜಲ ಶೋಧನೆಗೆ ಜೈವಿಕ ಹಾಗೂ ಭೌಗೋಳಿಕ ಸೂಚಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಸುಲಭವಾಗಿ ನೀರಿನ ನೆಲೆಯನ್ನು ಗುರುತಿಸುವ ‘ಉದಕಾರ್ಗಳ’ ಶಾಸ್ತ್ರವು ನೈಸರ್ಗಿಕ ಜ್ಞಾನದ ಪ್ರತೀಕವಾಗಿದೆ. ವರಾಹಮಿಹಿರನ ‘ಬೃಹತ್ ಸಂಹಿತೆ’ಯ ಪ್ರಭಾವವನ್ನು ಹೊಂದಿರುವ ರಟ್ಟಕವಿಯ ‘ರಟ್ಟಮತಶಾಸ್ತ್ರ’ವು ಅಂತರ್ಜಲ ಪತ್ತೆಯ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟ ವಿಧಾನಗಳನ್ನು ಸವಿವರವಾಗಿ ಬಿಚ್ಚಿಡುತ್ತದೆ. ಮನುಷ್ಯನ ದೇಹದಲ್ಲಿ ರಕ್ತನಾಳಗಳು ಹರಿಯುವಂತೆ, ಭೂಮಿಯ ಗರ್ಭದಲ್ಲಿ ಜಲನಾಳಗಳಿವೆ ಎಂಬುದನ್ನು ಈ ಕೃತಿ ಬಲವಾಗಿ ಪ್ರತಿಪಾದಿಸುತ್ತದೆ. ವಿಶೇಷವಾಗಿ ನಿರ್ದಿಷ್ಟ ಸಸ್ಯ ಸಂಕುಲಗಳು (ನೇರಲ, ಅತ್ತಿ, ಮತ್ತಿ), ಅವುಗಳ ಬಳಿ ಇರುವ ಹುತ್ತಗಳು, ಕಪ್ಪೆ, ಆಮೆಯಂತಹ ಜೀವಿಗಳ ಉಪಸ್ಥಿತಿ, ಮಣ್ಣಿನ ಬಣ್ಣ ಮತ್ತು ವಾಸನೆಯ ಆಧಾರದ ಮೇಲೆ ಅಂತರ್ಜಲದ ನಿಖರ ದಿಕ್ಕು ಹಾಗೂ ಆಳವನ್ನು ಅಳೆಯುವ ಸಾಂಪ್ರದಾಯಿಕ ತಂತ್ರಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಜಾನಪದ ಅನುಭವಗಳು ಹಾಗೂ ಗೆದ್ದಲು ಹುಳುಗಳ ತೇವಾಂಶ ಶೋಧನಾ ಪ್ರವೃತ್ತಿಯು ಈ ಪ್ರಾಚೀನ ಜ್ಞಾನದ ವೈಜ್ಞಾನಿಕತೆಯನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ. ಆಧುನಿಕ ಜಲಶೋಧನಾ ತಂತ್ರಜ್ಞಾನಗಳು ವಿಫಲವಾಗುತ್ತಿರುವ ಇಂದಿನ ದಿನಗಳಲ್ಲಿ, ಇಂತಹ ಸಮೃದ್ಧ ಸಾಂಪ್ರದಾಯಿಕ ಜ್ಞಾನವನ್ನು ವಿಜ್ಞಾನದ ಬೆಳಕಿನಲ್ಲಿ ಮರುಪರಿಶೀಲಿಸಿ, ಮೌಲ್ಯೀಕರಿಸುವ ತುರ್ತು ಅಗತ್ಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶೇಷಯ್ಯಂಗಾರ್ ಎಚ್. (ಸಂ.), (1950), ರಟ್ಟಮತಂ, ಮದ್ರಾಸ್: ಮದ್ರಾಸ್ ಗವರ್ನಮೆಂಟ್ ಓರಿಯಂಟಲ್ ಸೀರೀಸ್.
ಕೊಟ್ರಪ್ಪಯ್ಯ ಶಾಸ್ತ್ರಿಗಳು ಯು.ವಿ.ಎಸ್. (ಸಂ.), (1978), ಹಾಲ (ಕುರುಬ) ರಟ್ಟಮತ ಶಾಸ್ತ್ರವು, ಕೊಟ್ಟೂರು: ಕೊಟ್ಟೂರು ಶ್ರೀ ಬಸವೇಶ್ವರ ಮುದ್ರಣಾಲಯ.
ಬಸವಯ್ಯ ಶಾಸ್ತ್ರಿಗಳು ಹಿರೇಮಠ ವೇ. (ಸಂ.), 60 ವರ್ಷಗಳ ಕುರುಬರ ರಟ್ಟಮತ ಶಾಸ್ತ್ರ, ಗದಗ: ಮೆ. ಪಿ.ಸಿ. ಶಾಬಾದಿಮಠ ಬುಕ್ ಡಿಪೋ.
ಜಕಬಾಳ ಎಸ್. ಎಫ್. (ಸಂ.), (2004), ಕುರುಬರ ರಟ್ಟಮತಶಾಸ್ತ್ರ, ಗದಗ: ವಿದ್ಯಾನಿಧಿ ಪ್ರಕಾಶನ.
ರಂಗಸ್ವಾಮಿ. ಎ, ಚಾವುಂಡರಾಯನ ಲೋಕೋಪಕಾರ ಒಂದು ಅಧ್ಯಯನ, ಮೈಸೂರು: ಮೈಸೂರು ವಿಶ್ವವಿದ್ಯಾಲಯ.
ವೀರೇಶ ಬಡಿಗೇರ (ಸಂ.), (2004), ಹಸ್ತಪ್ರತಿ ಅಧ್ಯಯನ 2, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಹಳ್ಳಿಕೇರಿ ಎಫ್. ಟಿ. (ಸಂ.), (2006), ಹಸ್ತಪ್ರತಿ ವ್ಯಾಸಂಗ 7, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.