ಎಚ್.ಎಲ್. ಪುಷ್ಪರವರ ಕಾವ್ಯಗಳಲ್ಲಿ ಪ್ರತಿಮೆಗಳು ಹಾಗೂ ಆಶಯಗಳು

Main Article Content

ಡಾ. ಮಂಜುನಾಥ ಹೆಚ್.

Abstract

ಕವಯಿತ್ರಿ ಎಚ್.ಎಲ್. ಪುಷ್ಪ ಅವರ ಕಾವ್ಯಗಳಲ್ಲಿ ಬಳಕೆಯಾಗಿರುವ ವಿವಿಧ ಪ್ರತಿಮೆಗಳು ಮತ್ತು ಅವುಗಳ ಹಿಂದಿರುವ ಸ್ತ್ರೀಪರ ಆಶಯಗಳನ್ನು ಇಲ್ಲಿ ತಾತ್ವಿಕವಾಗಿ ವಿಶ್ಲೇಷಿಸಲಾಗಿದೆ. ಪುರುಷಪ್ರಧಾನ ಸಮಾಜವು ಸಾಂಪ್ರದಾಯಿಕವಾಗಿ ನಿಸರ್ಗದ ಅಂಶಗಳನ್ನು (ಭೂಮಿ, ನದಿ) ಹೆಣ್ಣಿಗೆ ಹಾಗೂ ಅಧಿಕಾರದ ಸಂಕೇತಗಳನ್ನು ಗಂಡಿಗೆ ಸಮೀಕರಿಸುವ ಬಗೆಯನ್ನು ಪ್ರಶ್ನಿಸುತ್ತಲೇ, ‘ಪರಿಸರ ಸ್ತ್ರೀವಾದ’ದ (Ecofeminism) ನೆಲೆಯಲ್ಲಿ ಹೆಣ್ಣು ಮತ್ತು ಪ್ರಕೃತಿಯ ಮೇಲಾಗುತ್ತಿರುವ ನಿರಂತರ ಶೋಷಣೆಯನ್ನು ಚರ್ಚಿಸಲಾಗಿದೆ. ಪುಷ್ಪರವರ ‘ಲೋಹದ ಕಣ್ಣು’, ‘ಎರಡು ರೇಖೆಗಳು’, ‘ರಾತ್ರಿ ರಾಣಿ’ ಮುಂತಾದ ಕವಿತೆಗಳಲ್ಲಿ ಬರುವ ಆಮೆ, ಹಕ್ಕಿ, ಮಲ್ಲಿಗೆ, ಮತ್ತು ಕಡಲಿನಂತಹ ರೂಪಕಗಳು ಮಹಿಳೆಯರ ಆಂತರಿಕ ತಲ್ಲಣಗಳು, ಮುಚ್ಚಿಟ್ಟ ಭಾವನೆಗಳು ಹಾಗೂ ಸಂಬಂಧಗಳ ಯಾಂತ್ರಿಕತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಧ್ವನಿಸುತ್ತವೆ. ಲಿಂಗಭೇದದ ಸಾಂಪ್ರದಾಯಿಕ ಪ್ರತಿಮೆಗಳನ್ನು ಬಳಸಿಕೊಂಡರೂ, ಅಂತಿಮವಾಗಿ ‘ಸ್ತ್ರೀ ಅನನ್ಯತೆ’ಯ ನಿರಂತರ ಹುಡುಕಾಟವೇ ಅವರ ಕಾವ್ಯದ ಮೂಲಭೂತ ಆಶಯ ಎಂಬುದನ್ನು ಈ ಅಧ್ಯಯನವು ಸ್ಪಷ್ಟಪಡಿಸುತ್ತದೆ.

Article Details

Section

Research Articles

Author Biography

ಡಾ. ಮಂಜುನಾಥ ಹೆಚ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ.

How to Cite

ಮಂಜುನಾಥ ಹೆಚ್. (2026). ಎಚ್.ಎಲ್. ಪುಷ್ಪರವರ ಕಾವ್ಯಗಳಲ್ಲಿ ಪ್ರತಿಮೆಗಳು ಹಾಗೂ ಆಶಯಗಳು. ಅಕ್ಷರಸೂರ್ಯ (AKSHARASURYA), 16(03), 77 to 81. https://aksharasurya.com/index.php/latest/article/view/2163

References

ಪುಷ್ಪ ಎಚ್.ಎಲ್., (2006), ಲೋಹದ ಕಣ್ಣು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.