ತಾರಾಬಾಯಿ ಶಿಂಧೆಯವರ ಜೀವನ ಮತ್ತು ಹೋರಾಟಗಳು
Main Article Content
Abstract
19ನೇ ಶತಮಾನದ ಅಗ್ರಗಣ್ಯ ಸ್ತ್ರೀವಾದಿ ಚಿಂತಕಿ ತಾರಾಬಾಯಿ ಶಿಂಧೆಯವರ ಬದುಕು, ಹೋರಾಟ ಮತ್ತು ಅವರ ಕ್ರಾಂತಿಕಾರಿ ವಿಚಾರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಪುರುಷಪ್ರಧಾನ ಸಮಾಜ, ಜಾತಿ ಶ್ರೇಣಿ ಹಾಗೂ ಧಾರ್ಮಿಕ ಅಸಮಾನತೆಗಳನ್ನು ದಿಟ್ಟವಾಗಿ ಪ್ರಶ್ನಿಸಿದ ಅವರು, ಭಾರತೀಯ ಸ್ತ್ರೀವಾದದ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದರು. ಸತ್ಯಶೋಧಕ ಸಮಾಜದ ತತ್ವಗಳಿಂದ ಪ್ರೇರಿತರಾಗಿದ್ದ ತಾರಾಬಾಯಿ, ತಮ್ಮ ಪ್ರಸಿದ್ಧ ಕೃತಿ ʼಸ್ತ್ರೀಪುರುಷ ತುಲನಾ’ (1882) ಮೂಲಕ ಸ್ತ್ರೀ-ಪುರುಷರ ನಡುವಿನ ದ್ವಂದ್ವ ನೈತಿಕ ಮಾನದಂಡಗಳನ್ನು ಮತ್ತು ಬೂಟಾಟಿಕೆಯನ್ನು ಕಟುವಾಗಿ ಟೀಕಿಸಿದರು. ಮಹಿಳೆಯರಿಗೆ ಶಿಕ್ಷಣ ಮತ್ತು ಸ್ವಾತಂತ್ರ್ಯವಿಲ್ಲದ ಆ ಕಾಲದಲ್ಲಿ, ವಿಧವೆಯರ ಶೋಷಣೆ ಮತ್ತು ಲಿಂಗ ತಾರತಮ್ಯದ ವಿರುದ್ಧ ಅವರು ಎತ್ತಿದ ಧ್ವನಿ ಇಂದಿಗೂ ಪ್ರಸ್ತುತವಾಗಿದೆ. ಅವರ ನಿರ್ಭೀತ ಬರಹಗಳು ಮತ್ತು ಸಮಾನತೆಯ ಬದ್ಧತೆಯು ಆಧುನಿಕ ಸ್ತ್ರೀವಾದಿ ಹಾಗೂ ಸಾಮಾಜಿಕ ನ್ಯಾಯದ ಚಳುವಳಿಗಳಿಗೆ ಹೇಗೆ ಬಲವಾದ ಬುನಾದಿಯಾಗಿದೆ ಎಂಬುದನ್ನು ಎತ್ತಿ ತೋರಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗೀತಾ ಕೃಷ್ಣಮೂರ್ತಿ (ಸಂ.), (2024), ಸಾಧನಾ ಸಂಚಯ, ಬಸವನಗುಡಿ, ಬೆಂಗಳೂರು: ಸತ್ಪ್ರಕಾಶನ, ಅಬಲಾಶ್ರಮ.