ಕರ್ನಾಟಕ ಚರಿತ್ರೆಗೆ ಇತಿಹಾಸಕಾರರಾದ ಷ.ಶೆಟ್ಟರ್ ಅವರ ಕೊಡುಗೆ

Main Article Content

ವೀರೇಶ ಬಡಿಗೇರ

Abstract

ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆ ರಚನಾಶಾಸ್ತ್ರದಲ್ಲಿ ಅತಿದೊಡ್ಡ ಹೆಸರು ಷ.ಶೆಟ್ಟರ್ ಅವರದ್ದು. ಮಧ್ಯಕಾಲೀನ ಹಾಗೂ ಪ್ರಾಚೀನ ಚರಿತ್ರೆ ಬರವಣಿಗೆಯಲ್ಲಿ ಅವರ ಬರಹಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಪಟ್ಟಿವೆ. ಇಂಗ್ಲಿಷ್ ಭಾಷೆಯಲ್ಲಿ ಅವರ ಆರಂಭಿಕ ಗ್ರಂಥಗಳು ಪ್ರಕಟಗೊಂಡರೂ ನಂತರದಲ್ಲಿ ಅವರು ಕನ್ನಡದಲ್ಲಿ ಬರೆದ ಗ್ರಂಥಗಳು ವಿದ್ವಾಂಸರ ಗಮನ ಸೆಳೆದವು. ಅವರ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಸಿದ್ಧಾಂತಗಳು ಎಲ್ಲ ಸಂದರ್ಭದಲ್ಲಿಯೂ ಜನಪರವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಕನ್ನಡ-ಕರ್ನಾಟಕ ಕೇಂದ್ರಿಕೃತವಾದ ನಂತರದ ಬರಹಗಳು ಕನ್ನಡದಲ್ಲಿ ಲಭ್ಯವಿದ್ದ ಅನೇಕ ಆಕರಗಳನ್ನು ಆಧರಿಸಿವೆ. ಅವು ಕರ್ನಾಟಕ ಚರಿತ್ರೆಯನ್ನು ಮರು ರಚಿಸಲು ಸಾಧ್ಯವಾಗಿವೆ.

Article Details

Section

Research Articles

Author Biography

ವೀರೇಶ ಬಡಿಗೇರ

ಸಹಾಯಕ ಪ್ರಾಧ್ಯಾಪಕರು, ಜಿ.ವಿ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ, ವಿಜಯನಗರ.

How to Cite

ವೀರೇಶ ಬಡಿಗೇರ. (2026). ಕರ್ನಾಟಕ ಚರಿತ್ರೆಗೆ ಇತಿಹಾಸಕಾರರಾದ ಷ.ಶೆಟ್ಟರ್ ಅವರ ಕೊಡುಗೆ. ಅಕ್ಷರಸೂರ್ಯ (AKSHARASURYA), 11(06), 146 to 150. https://aksharasurya.com/index.php/latest/article/view/1965

References

ಶೆಟ್ಟರ್, ಷ. 1981, ಶ್ರವಣಬೆಳಗೊಳ, ಬೆಂಗಳೂರು.

ಶೆಟ್ಟರ್, ಷ. 2007, ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ: ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ, ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2008, ಸೋಮನಾಥಪುರ, ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2011, ಕಪ್ಪೆಅರಭಟ್ಟನ ಶಾಸನ, ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2012, ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ, ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2012, ಸಾವಿಗೆ ಆಹ್ವಾನ: ಶ್ರವಣಬೆಳಗೊಳದ ಧಾರ್ಮಿಕ ಇತಿಹಾಸದ ಹಿನ್ನೆಲೆಯಲ್ಲಿ ಮರಣ ಪ್ರಕ್ರಿಯೆಯ ಅಭ್ಯಾಸ [ಕನ್ನಡಕ್ಕೆ ಸದಾನಂದ ಕನವಳ್ಳಿ ಮತ್ತು ಷ. ಶೆಟ್ಟರ್], ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಶೆಟ್ಟರ್, ಷ. 2014, ಸಾವನ್ನು ಅರಸಿ: ಇಚ್ಛಾಮರಣದ ಜೈನಸಿದ್ಧಾಂತ ಮತ್ತು ಚಾರಿತ್ರಿಕ ಸಾದೃಶ್ಯಗಳು [ಕನ್ನಡಕ್ಕೆ ಓ.ಎಲ್. ನಾಗಭೂಷಣಸ್ವಾಮಿ], ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2014, ಸಾವನ್ನು ಸ್ವಾಗತಿಸಿ: ಶ್ರವಣಬೆಳಗೊಳ ಇತಿಹಾಸದ ಹಿನ್ನೆಲೆಯಲ್ಲಿ ಇಚ್ಛಾಮರಣ ಪ್ರಕ್ರಿಯೆ [ಕನ್ನಡಕ್ಕೆ ಸದಾನಂದ ಕನವಳ್ಳಿ ಮತ್ತು ಷ. ಶೆಟ್ಟರ್], ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ. 2014, ಹಳಗನ್ನಡ: ಲಿಪಿ, ಲಿಪಿಕಾರ ಲಿಪಿ ವ್ಯವಸಾಯ, ಸಂಪುಟ- 1, ಅಭಿನವ ಪ್ರಕಾಶನ, ಬೆಂಗಳೂರು.

ಶೆಟ್ಟರ್, ಷ.(ಸಂ.) 2017, ಹಳಗನ್ನಡ: ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ ಸಂಪುಟ-2, ಅಭಿನವ ಪ್ರಕಾಶನ, ಬೆಂಗಳೂರು.

ಅರುಣಿ ಎಸ್.ಕೆ. ಕನ್ನಡದ ‘ಇತಿಹಾಸ ಮಾರ್ಗಕಾರ’ ಪ್ರೊಫೆಸ್ಸರ್ ಷ.ಶೆಟ್ಟರ್

ಗೋವಿಂದರಾಜು ಸಿ.ಆರ್. ಪ್ರೊ.ಎಸ್.ಶೆಟ್ಟರ್: ಸಂಶೋಧನಾ ಬಿರುನುಡಿಯ ‘ರೂವಾರಿ’