ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ನವೋದಯ ಸಾಹಿತ್ಯದ ಪಾತ್ರ
Main Article Content
Abstract
ಪ್ರಸ್ತುತ ಲೇಖನವು ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ, ವಿಶೇಷವಾಗಿ ನವೋದಯ (Navodaya) ಸಾಹಿತ್ಯ ಚಳವಳಿಯ (ಸುಮಾರು 1921-1958) ಮಹತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ. ಇದು ಪಾಶ್ಚಾತ್ಯ ರೊಮ್ಯಾಂಟಿಕ್ ಸಾಹಿತ್ಯದ (Romanticism) ಪ್ರಭಾವದಿಂದ ರೂಪುಗೊಂಡಿತು.
ಬಿ. ಎಂ. ಶ್ರೀಕಂಠಯ್ಯನವರ (B. M. Srikantaiah) 'ಇಂಗ್ಲೀಷ್ ಗೀತೆಗಳು' (1921) ಈ ಯುಗದ ಆರಂಭದ ಪ್ರತಿನಿಧಿಕ ಕೃತಿಯೆಂದು ಪರಿಗಣಿಸಲಾಗಿದೆ; ಇದು ಕನ್ನಡ ಕಾವ್ಯಕ್ಕೆ ಹೊಸ ಮಾರ್ಗ ಮತ್ತು ಮಾದರಿಯನ್ನು ಒದಗಿಸಿತು. ಗೋವಿಂದ ಪೈ ಅವರ ಪ್ರಾಸತ್ಯಾಗದಂತಹ ದಿಟ್ಟ ಪ್ರಯೋಗಗಳು ಅಭಿವ್ಯಕ್ತಿಯ ಸರಳತೆಗೆ ಕಾರಣವಾಯಿತು. ನವೋದಯವು ಮನುಷ್ಯ-ಕೇಂದ್ರಿತ ಚಿಂತನೆ, ಜೀವನಶ್ರದ್ಧೆ, ಪ್ರಕೃತಿ ಪ್ರೇಮ, ಮತ್ತು ರಾಷ್ಟ್ರೀಯತೆಯನ್ನು ತನ್ನ ಪ್ರಮುಖ ಲಕ್ಷಣಗಳನ್ನಾಗಿ ಮಾಡಿಕೊಂಡಿತು. ಈ ಚಳವಳಿಯು ಸಾಹಿತ್ಯವನ್ನು ಉಪದೇಶದ ನೆಲೆಯಿಂದ ಹೊರತಂದು, ಭಾವನೆಗಳು, ಕನಸುಗಳು ಮತ್ತು ದಾರ್ಶನಿಕತೆಯನ್ನು ಒಳಗೊಂಡ ಸರಳ ಹಾಗೂ ಆತ್ಮೀಯ ಅಭಿವ್ಯಕ್ತಿಯಾಗಿ ಪರಿವರ್ತಿಸಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನವೋದಯ – ಜಿ. ಎಸ್. ಶಿವರುದ್ರಪ್ಪ.
ಹೊಸಗನ್ನಡ ಸಾಹಿತ್ಯ - ಪ್ರೊ. ಎಲ್. ಎಸ್. ಶೇಷಗಿರಿರಾವ್.
ಹೊಸಗನ್ನಡ ಕವಿತೆಯ ಮೇಲೆ ಇಂಗ್ಲೀಷ್ ಕಾವ್ಯದ ಪ್ರಭಾವ – ಎಸ್. ಅನಂತನಾರಾಯಣ.
ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ – ಡಾ. ಹರಿಕೃಷ್ಣ ಭರಣ್ಯ.
ಶಿಷ್ಟ ಪರಿಶಿಷ್ಟ – ಡಾ. ಪುರುಷೋತ್ತಮ ಬಿಳಿಮಲೆ.
ಪಾಶ್ಚಾತ್ಯ ಸಾಹಿತ್ಯವಾದಗಳು ಮತ್ತು ಕನ್ನಡ ಸಾಹಿತ್ಯ ಸಂದರ್ಭ. – ಡಾ. ಸಿ. ಆರ್. ಎರವಿನ ತೆಲಿಮಠ.