ಕನ್ನಡ ಸಾಹಿತ್ಯ ಪತ್ರಿಕೆ ಮತ್ತು ಮುದ್ರಣ ಕ್ಷೇತ್ರಕ್ಕೆ ಮಿಷನರಿಗಳ ಕೊಡುಗೆ
Main Article Content
Abstract
ಪ್ರಸ್ತುತ ಲೇಖನವು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಮುದ್ರಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು (Christian Missionaries) ನೀಡಿದ ಮಹತ್ವದ ಕೊಡುಗೆಯನ್ನು ವಿಶ್ಲೇಷಿಸುತ್ತದೆ. 18-19ನೇ ಶತಮಾನದಲ್ಲಿ, ತಮ್ಮ ಮತ ಪ್ರಚಾರದ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಇವರು, ಮೊದಲು ಮುದ್ರಣ ಯಂತ್ರಗಳನ್ನು (Printing Press) ಪರಿಚಯಿಸಿದರು. ಇದರ ಪರಿಣಾಮವಾಗಿ, ಹಿಂದೆ ರಾಜಾಶ್ರಯ ಮತ್ತು ಧರ್ಮಗಳನ್ನು ಅವಲಂಬಿಸಿದ್ದ ಸಾಹಿತ್ಯವು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಯಿತು.
ಮಿಷನರಿಗಳಾದ ಜಾನ್ ಗ್ಯಾರೆಟ್, ಬಿ. ಎಲ್. ರೈಸ್, ಮತ್ತು ಫರ್ಡಿನ್ಯಾಂಡ್ ಕಿಟೆಲ್ ಅವರು ಪ್ರಾಚೀನ ಕನ್ನಡ ಹಸ್ತಪ್ರತಿಗಳು, ಶಾಸನಗಳು ಮತ್ತು ಗ್ರಂಥಗಳನ್ನು (ಕವಿರಾಜಮಾರ್ಗ, ಶಬ್ದಕೋಶಗಳು) ಮುದ್ರಣ ರೂಪಕ್ಕೆ ತರುವ ಮೂಲಕ ಗ್ರಂಥ ಸಂಪಾದನೆಗೆ ಅಡಿಪಾಯ ಹಾಕಿದರು. ಬಾಸೆಲ್ ಮಿಷನ್ನ ಹರ್ಮನ್ ಮೋಗ್ಲಿಂಗ್ ಅವರು 1843 ರಲ್ಲಿ ಕನ್ನಡದ ಪ್ರಥಮ ಪತ್ರಿಕೆಯಾದ 'ಮಂಗಳೂರು ಸಮಾಚಾರ' ವನ್ನು ಪ್ರಾರಂಭಿಸಿದರು. ಈ ಬೆಳವಣಿಗೆಯು ಖಾಸಗಿ ವ್ಯಕ್ತಿಗಳಿಗೂ ಸ್ಫೂರ್ತಿ ನೀಡಿ, 'ಕರ್ನಾಟಕ ಪ್ರಕಾಶಿಕಾ', 'ಕರ್ಣಾಟಕ ಕಾವ್ಯ ಮಂಜರಿ' ಮುಂತಾದ ಸಾಹಿತ್ಯ ಪತ್ರಿಕೆಗಳ ಉದಯಕ್ಕೆ ಕಾರಣವಾಯಿತು, ಮತ್ತು ಇದು ಹೊಸಗನ್ನಡ ಸಾಹಿತ್ಯದ ಸೃಷ್ಟಿಗೆ ಪ್ರಮುಖ ವೇದಿಕೆಯಾಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮೈಸೂರು ವಿಶ್ವವಿದ್ಯಾನಿಲಯ, ವಿಶ್ವಕೋಶ
ಶ್ರೀನಿವಾಸ ಹಾವನೂರ – ಹೊಸಗನ್ನಡದ ಅರುಣೋದಯ, ಅಂಕಿತ ಪುಸ್ತಕ
ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ, ಸಂಪುಟ 1, ನವಕರ್ನಾಟಕ ಪ್ರಕಾಶನ.
ಎಲ್. ಎಸ್. ಶೇಷಗಿರಿ - ಹೊಸಗನ್ನಡದ ಸಾಹಿತ್ಯ ಚರಿತ್ರೆ, ನವಕರ್ನಾಟಕ ಪ್ರಕಾಶನ.