ಕನ್ನಡ ಸಣ್ಣಕತೆಗಳಲ್ಲಿ ಆಧುನಿಕತೆಯ ಪ್ರವೇಶದಿಂದಾದ ಪರಿಣಾಮಗಳು
Main Article Content
Abstract
ಕೈಗಾರಿಕಾ ಕ್ರಾಂತಿ ಮತ್ತು ಪಾಶ್ಚಾತ್ಯ ವಸಾಹತುಶಾಹಿಯ ಮೂಲಕ ಭಾರತವನ್ನು ಪ್ರವೇಶಿಸಿದ ಆಧುನಿಕತೆಯು (Modernity) ಕನ್ನಡ ಸಣ್ಣಕತೆಗಳ ಮೇಲೆ ಉಂಟುಮಾಡಿದ ಪರಿಣಾಮಗಳನ್ನು ಈ ಲೇಖನವು ವಿಶ್ಲೇಷಿಸುತ್ತದೆ. ಆಧುನಿಕ ಶಿಕ್ಷಣ, ಮುದ್ರಣ ಮತ್ತು ಹೊಸ ತಂತ್ರಜ್ಞಾನಗಳ ಆಗಮನವು ಪರಂಪರಾಗತವಾದ ಭಾರತೀಯ ಸಮಾಜ ಮತ್ತು ಮೌಲ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಯಿತು.
ದೇವನೂರು ಮಹಾದೇವ ಅವರ 'ಡಾಂಬರು ಬಂದುದು' ಕತೆಯಲ್ಲಿ, ಶಿಕ್ಷಣವು ಯುವಜನರಿಗೆ ಆತ್ಮವಿಶ್ವಾಸ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸುವ ಧೈರ್ಯವನ್ನು ನೀಡಿದ್ದರೂ, ಪರಿಸರ ನಾಶದಂತಹ ಋಣಾತ್ಮಕ ಪರಿಣಾಮಗಳನ್ನು ಎತ್ತಿ ಹಿಡಿಯಲಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟಾಫೀಸು' ಕತೆಯಲ್ಲಿ, ಹೊಸ ಸಂಪರ್ಕ ಸಾಧನವಾದ ಪೋಸ್ಟಾಫೀಸು (ಅಂಚೆ ಕಛೇರಿ) ಹೇಗೆ ವ್ಯಕ್ತಿಯ ವೈಯಕ್ತಿಕ ನೆಮ್ಮದಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸಿ, ಹೊಸ ಸಂಕಟಗಳಿಗೆ ಕಾರಣವಾಯಿತು ಎಂಬುದನ್ನು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಒಟ್ಟಾರೆಯಾಗಿ, ಆಧುನಿಕತೆಯು ಸಮಾಜ ಮತ್ತು ಸಂಬಂಧಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳೆರಡನ್ನೂ ಬೀರಿದೆ ಎಂದು ಲೇಖನವು ತೀರ್ಮಾನಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಆಧುನಿಕತೆ ಮತ್ತು ಕನ್ನಡ ಸಾಹಿತ್ಯ ಪ್ರಕಾರಗಳು – ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಕನ್ನಡ ಸಣ್ಣಕಥೆಗಳು- ನ್ಯಾಷನಲ್ ಬುಕ್ ಟ್ರಷ್ಟ್ ಇಂಡಿಯಾ
ಸಂಶೋಧನೆ ತಾತ್ವಿಕ ಆಯಾಮಗಳು-ಕನ್ನಡ ವಿಶ್ವವಿದ್ಯಾಲಯ ಹಂಪಿ
ದೇಶಿಶಿಕ್ಷಣ ಮತ್ತು ಜಾಗತೀಕರಣ-ಡಾ. ರಾಜೇಂದ್ರ ಚೆನ್ನಿ
ದ್ಯಾವನೂರು -ದೇವನೂರು ಮಹಾದೇವ
ಅಬಚೂರಿನ ಪೋಸ್ಟಾಫೀಸು- ಪೂರ್ಣಚಂದ್ರ ತೇಜಸ್ವಿ