ರಕ್ತಾಕ್ಷಿ-ಹ್ಯಾಬ್ಲೆಟ್ ನಾಟಕಗಳಲ್ಲಿನ ವಸ್ತು ನಿರ್ವಹಣೆ: ತೌಲನಿಕ ವಿವೇಚನೆ

Main Article Content

ವಿಜಯಲಕ್ಷ್ಮಿ ಡಿ.
ಸುಮಾ ಆರ್.

Abstract

ಕಾಲ, ದೇಶ, ಸಂಸ್ಕೃತಿ ಯಾವುದೇ ಇರಲಿ ವ್ಯಕ್ತಿಯ ಅನುಭವಕ್ಕೆ ಬರುವ ಕೆಲವು ಸಾರ್ವಕಾಲಿಕ ಭಾವನುಭವಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ತ್ಯಾಗ, ಅನುಕಂಪ, ದೈರ್ಯ, ಅಭಿಮಾನ, ಅವಮಾನ ಇವೇ ಮೊದಲಾದ ಸಮಾನ ಅಂಶಗಳನ್ನು ಹೊಂದಿರುತ್ತವೆ. ಇಂತಹ ಸಮಾನ ಅಥವಾ ವಿಭಿನ್ನ ಅನುಭವ ಮತ್ತು ಅಭಿವ್ಯಕ್ತಿಗಳ ವೈಚಿತ್ರವನ್ನು ನೋಡುವ ಪ್ರಯತ್ನವನ್ನು ತೌಲನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಒಂದು ಕಲಾ ಕೃತಿಗೆ ನಿರ್ದಿಷ್ಟ 'ವಸ್ತು' ಮೂಲ ಆಕರ, ಸಾಹಿತ್ಯದ ಯಾವ ಪ್ರಕಾರದ ಕೃತಿಗಾಗಲಿ ವಸ್ತು ಇದ್ದೇ ಇರುತ್ತದೆ. ವಸ್ತು ಸಾಮಾನ್ಯವಾದರೂ ಅದರ ಅಭಿವ್ಯಕ್ತಿಯ ವಿಶಿಷ್ಟ ರೀತಿ ಕೃತಿಯೊಂದರ ಯಶಸ್ಸಿಗೆ ಕಾರಣವಾಗುತ್ತದೆ. ಹ್ಯಾಬ್ಲೆಟ್ ನಾಟಕದ ಕಥಾವಸ್ತು ಡೆನ್ಮಾರ್ಕಿನ ದೊರೆ, ಅವನ ರಾಣಿ ಗರೂಡ್ ಇವರ ಮಗ ಹ್ಯಾಮ್ಮೆಟ್, ದೊರೆಯ ತಮ್ಮ ಕ್ಲಾಡಿಯನ್ ಇವರ ಸುತ್ತ ಹೆಣೆದಿರುವ ಕಥೆ. ರಕ್ತಾಕ್ಷಿಯ ಕಥಾವಸ್ತು ಸಂಸ್ಥಾನವೊಂದರ ದೊರೆಯನ್ನು ಕೊಂದು ರಾಜ್ಯವನ್ನು ಕಬಳಿಸಿ ಸಂಬಂಧವನ್ನು ಇರಿಸಿಕೊಂಡವನನ್ನು ಕೊಲ್ಲುವ ನಿರ್ಧಾರ ಮಾಡಿದ ಯುವರಾಜ ಬಸವಯ್ಯನ ಕಥೆಯಾಗಿದೆ.

Article Details

Section

Research Articles

Author Biographies

ವಿಜಯಲಕ್ಷ್ಮಿ ಡಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ರಾಮಯ್ಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮತ್ತೀಕೆರೆ, ಬೆಂಗಳೂರು.

ಸುಮಾ ಆರ್.

ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಜೆ.ಬಿ.ಸಿ.ಎಂ.ಎಸ್‌., ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.

References

ಸಿ. ಎನ್. ರಾಮಚಂದ್ರನ್: ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು, ಪ್ರಸಾರಂಗ, ಮೈಸೂರು ವಿಶ್ವವಿದ್ಯಾನಿಲಯ, 1977.

ಡಾ. ಎಚ್. ತಿಪ್ಪೇರುದ್ರಸ್ವಾಮಿ: ತೌಲನಿಕ ಕಾವ್ಯ ಮೀಮಾಂಸೆ, ಪ್ರ: 2.2. . , , 1985.

ಎಲ್. ಎಸ್. ಶೇಷಗಿರಿರಾವ್: ವಿಲಿಯಮ್ ಷೇಕ್ಸಪಿಯರ್, ಪ್ರಸಾರಂಗ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು, 1961.

ಕೆ. ಮರುಳ ಸಿದ್ದಪ್ಪ; ಆಧುನಿಕ ಕನ್ನಡ ನಾಟಕಗಳು, ಲಿಪಿ ಪ್ರಕಾಶನ, , 1993.

ನರಹಳ್ಳಿ ಬಾಲ ಸುಬ್ರಮಣ್ಯ: ಕುವೆಂಪು ನಾಟಕಗಳ ಅಧ್ಯಯನ, ಅಂಕಿತ ಪ್ರಕಾಶನ, ಬೆಂಗಳೂರು.

ತು.ಶು. ಶಾಮರಾಯರು: ಕನ್ನಡ ನಾಟಕಗಳು, ಮೈಸೂರು.