ಚಾಮರಸನ ಪ್ರಭುಲಿಂಗಲೀಲೆ
Main Article Content
Abstract
ಹದಿನೈದನೆಯ ಶತಮಾನದ ಪ್ರಮುಖ ವೀರಶೈವ ಕವಿ ಚಾಮರಸನು ರಚಿಸಿದ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವಿನ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ಮಹತ್ವದ ಕೃತಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ರಚಿತವಾದ ಈ ಕಾವ್ಯವು ಅಲ್ಲಮನು ಮಾಯೆಯನ್ನು ಗೆದ್ದು, ಶೂನ್ಯ ಸಿಂಹಾಸನವನ್ನೇರುವ ಪರಿಯನ್ನು ವರ್ಣಿಸುತ್ತದೆ. ಲೌಕಿಕ ಮತ್ತು ಪಾರಮಾರ್ಥಿಕ ಮೌಲ್ಯಗಳ ಸಂಘರ್ಷವನ್ನು ಇಲ್ಲಿ ಚಿತ್ರಿಸಲಾಗಿದೆ. ಕವಿ ತನ್ನ ಪಾಂಡಿತ್ಯ ಮತ್ತು ಭಕ್ತಿಭಾವವನ್ನು ಈ ಕೃತಿಯ ಮೂಲಕ ವ್ಯಕ್ತಪಡಿಸಿದ್ದು, ವೀರಶೈವ ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮತ್ತು ಅಲ್ಲಮನ ವ್ಯಕ್ತಿತ್ವವನ್ನು ಮಹೋನ್ನತಿಗೆ ಏರಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕನ್ನಡ ಸಾಹಿತ್ಯ ಚರಿತ್ರೆ : ರಂ.ಶ್ರೀ ಮುಗಳಿ.
ಪ್ರಭುಲಿಂಗಲೀಲೆ ಸಂಗ್ರಹ: ಬಿ.ಎಂ. ಶ್ರೀಕಂಠಯ್ಯ.
ಚಾಮರಸಕೃತ ಪ್ರಭುಲಿಂಗಲೀಲೆ (ಭಾಗ-1): ಸಂಪಾದಕರು: ಆರ್.ಸಿ. ಹಿರೇಮಠ, ಎಮ್.ಎಸ್. ಸುಂಕಾಪುರ.
ಚಾಮರಸ ಕವಿಯ ಪ್ರಭುಲಿಂಗಲೀಲೆ ಗದ್ಯಾನುವಾದ ಮತ್ತು ಕಾವ್ಯ ವಿಮರ್ಶೆ: ಲೇಖಕರು: ಪ್ರೋ. ಬಿ.ಸಿ ಜವಳಿ ಎಮ್.ಎ ಮತ್ತು ಶ್ರೀಮಲ್ಲಾಬಾದಿ ವೀರಭದ್ರಪ್ಪ.
ಪ್ರಭುಲಿಂಗಲೀಲೆಯ ಸಂಗ್ರಹ: ಸಂ: ಎಂ.ಎಸ್. ಬಸವಲಿಂಗಯ್ಯ ಮತ್ತು ಎಂ.ಆರ್. ಶ್ರೀನಿವಾಸಮೂರ್ತಿ.