ಪಾಲನಹಳ್ಳಿ ಕುಮಾರರಾಮನ ಜಾತ್ರೆ (ಸ್ಥಳೀಕರು ಮತ್ತು ವಲಸಿಗರ ಸಮನ್ವಯದ ಜಾತ್ರೆ)

Main Article Content

ಸತೀಶ್ ಎ. ಎಂ.

Abstract

ತುಮಕೂರು ಜಿಲ್ಲೆಯ ದೊಡ್ಡಪಾಲನಹಳ್ಳಿಯಲ್ಲಿ ನಡೆಯುವ ಕುಮಾರರಾಮನ ಜಾತ್ರೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಪರಿಚಯಿಸಲಾಗಿದೆ. ಕುಮ್ಮಟದುರ್ಗದ ಕಂಪಿಲರಾಯನ ಮಗನಾದ ಕುಮಾರರಾಮನು ಇಲ್ಲಿ ಜಾನಪದ ದೈವವಾಗಿ ಪೂಜಿಸಲ್ಪಡುತ್ತಾನೆ. ಕುಮ್ಮಟದುರ್ಗದಿಂದ ವಲಸೆ ಬಂದ ಸಹಚರರು ಮತ್ತು ಸ್ಥಳೀಯರ ನಡುವಿನ ಸಮನ್ವಯತೆಯನ್ನು ಈ ಜಾತ್ರೆಯಲ್ಲಿ ಕಾಣಬಹುದು. ಹೊನ್ನಾರ, ಜಾಗಾರ, ಈರಮಾಸ್ತಿ ಪೂಜೆ, ಓಕಳಿ ಆಟ ಮತ್ತು ಹುಲಿರಾಮಪ್ಪನ ಆರಾಧನೆಗಳಂತಹ ವಿಶಿಷ್ಟ ಆಚರಣೆಗಳನ್ನು ವಿವರವಾಗಿ ಕಟ್ಟಿಕೊಡಲಾಗಿದೆ. ಐತಿಹಾಸಿಕ ವೀರನೊಬ್ಬನು ಗ್ರಾಮೀಣ ಜನರ ನಂಬಿಕೆಯ ಭಾಗವಾಗಿ ಹೇಗೆ ಸಾಂಸ್ಕೃತಿಕ ನಾಯಕನಾಗಿ ನೆಲೆನಿಂತಿದ್ದಾನೆ ಹಾಗೂ ಕೃಷಿ ಸಂಸ್ಕೃತಿಯೊಂದಿಗೆ ಜಾತ್ರೆ ಹೇಗೆ ಬೆರೆತಿದೆ ಎಂಬುದನ್ನು ಈ ಕ್ಷೇತ್ರಕಾರ್ಯ ಆಧಾರಿತ ಅಧ್ಯಯನವು ನಿರೂಪಿಸುತ್ತದೆ.

Article Details

Section

Research Articles

Author Biography

ಸತೀಶ್ ಎ. ಎಂ.

ಸಂಶೋಧನಾ ವಿದ್ಯಾರ್ಥಿ, ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು.

References

ಡಾ. ಪಿ. ವಿ. ಕೃಷ್ಣಮೂರ್ತಿ, ಲೇ. ದೊಡ್ಡಪಾಲನಹಳ್ಳಿ ವೀರಗಲ್ಲು ಶಾಸನ ಮತ್ತು ಶಿಲ್ಪ, ಇತಿಹಾಸ ದರ್ಶನ ಸಂಪುಟ, 23/2008. ಕರ್ನಾಟಕ ಇತಿಹಾಸ ಅಕಾಡೆಮಿ.

ಡಿ. ವಿ. ಪರಮಶಿವಮೂರ್ತಿ, ಲೇ. ವೀರ ಕಂಪಿಲರಾಯನ ಎರಡನೇ ಶಾಸನ ಪತ್ತೆ ದಿನಾಂಕ 10/04/2022, ಪ್ರಜಾಪ್ರಗತಿ ದಿನಪತ್ರಿಕೆ, ತುಮಕೂರು.

ಸತೀಶ್ ಎ. ಎಂ., ದೊಡ್ಡಪಾಲನಹಳ್ಳಿ ಇತಿಹಾಸ ಮತ್ತು ಐತಿಹ್ಯಗಳ ಆಧ್ಯಯನ, ಸಂಪುಟ 1, ಕನ್ನಡ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆ. 2021.

ಹುಲ್ಲೂರು ಶ್ರೀನಿವಾಸ ಜೋಯಿಸರು, ಗಂಡುಗಲಿ ಕುಮಾರರಾಮ, ರಸಿಕ ರಂಜಿನಿ ಪ್ರಕಾಶನ, ಅರಸೀಕೆರೆ.